ಬೆಳಕು-ಬಳ್ಳಿ

ಚಂದದ ಬಾಳಿಗೆ

Share Button

ಒಂದು ಭರವಸೆಯ ಬೆಳಕು
ಬೇಕು ಚಂದದ ಬಾಳಿಗೆ
ಖುಷಿಯ ಹಂಚಿಕೊಂಡು
ಸಾಗಬೇಕು ನಾವು ನಾಳೆಗೆ
ಅನ್ಯತಾ ಕಿವಿಕೊಡಬೇಡಿ,
ಇಲ್ಲಸಲ್ಲದ ಗಾಳಿ ಮಾತಿಗೆ
ಗೌರವಿಸಿ ಆದರಿಸಿ ಅವರವರ
ಮನದ ಭಾವನೆಗಳಿಗೆ

ನಕ್ಕು ಹಗುರಾಗಿ ಬಿಡಿ
ತೊರೆದು ಮನದೊಳಗಿನ ಭಾರ
ಇಂದಿನದು ಇಂದಿಗೆ ಇರಲಿ,
ನಾಳೆ ಎಂಬುದು ನಗುನಗುತ
ಮೆಲ್ಲಗೆ ಬರಲಿ ನೆಮ್ಮದಿಯ ತರಲಿ
ಉಸಿರು ಉಸಿರಲ್ಲಿ ಬೆರೆತು ಹೋಗಲಿ
ಬೀಸಿ ಬರುವ ಮಲ್ಲಿಗೆಯ ಕಂಪು
ಸಿಕ್ಕ ಒಂದು ಸದಾವಕಾಶವನ್ನು
ಉಪಯೋಗಿಸಿಕೊಂಡು ಬಿಡಿ ಬಾಳಿಗೆ

ಮನದ ತುಂಬಾ ತುಂಬಿಕೊಳ್ಳಿ
ಪ್ರೀತಿ ಆತ್ಮೀಯತೆಯ ಕೃತಜ್ಞತೆಗೆ
ಹೆಜ್ಜೆ ಗುರುತು ಮೂಡಲಿ
ಜೀವಿತದ ಉತ್ಕಟತೆಗೆ
ಬದುಕಿನ ಭವಣೆಗಳ ಮೀರಿನಿಲ್ಲುವ
ಸಾಗಿ ಬಂದ ದಾರಿಯ ಸಾರ್ಥಕತೆಗೆ

ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರಕನ್ನಡ.

6 Comments on “ಚಂದದ ಬಾಳಿಗೆ

  1. ಬದುಕಿನ ಸಾರ್ಥಕತೆಯ ಭಾವ ವ್ಯಕ್ತವಾದ ಕವನ ..ಚೆನ್ನಾಗಿದೆ ಸರ್..

  2. ಉತ್ತಮ ಸಕಾರಾತ್ಮಕ ಆಶಯವನ್ನು ಹೊತ್ತ ಕವನ ಚೆನ್ನಾಗಿದೆ.

  3. ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು

Leave a Reply to ಪದ್ಮಾ ಆನಂದ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *