ಚಂದದ ಬಾಳಿಗೆ

Share Button

ಒಂದು ಭರವಸೆಯ ಬೆಳಕು
ಬೇಕು ಚಂದದ ಬಾಳಿಗೆ
ಖುಷಿಯ ಹಂಚಿಕೊಂಡು
ಸಾಗಬೇಕು ನಾವು ನಾಳೆಗೆ
ಅನ್ಯತಾ ಕಿವಿಕೊಡಬೇಡಿ,
ಇಲ್ಲಸಲ್ಲದ ಗಾಳಿ ಮಾತಿಗೆ
ಗೌರವಿಸಿ ಆದರಿಸಿ ಅವರವರ
ಮನದ ಭಾವನೆಗಳಿಗೆ

ನಕ್ಕು ಹಗುರಾಗಿ ಬಿಡಿ
ತೊರೆದು ಮನದೊಳಗಿನ ಭಾರ
ಇಂದಿನದು ಇಂದಿಗೆ ಇರಲಿ,
ನಾಳೆ ಎಂಬುದು ನಗುನಗುತ
ಮೆಲ್ಲಗೆ ಬರಲಿ ನೆಮ್ಮದಿಯ ತರಲಿ
ಉಸಿರು ಉಸಿರಲ್ಲಿ ಬೆರೆತು ಹೋಗಲಿ
ಬೀಸಿ ಬರುವ ಮಲ್ಲಿಗೆಯ ಕಂಪು
ಸಿಕ್ಕ ಒಂದು ಸದಾವಕಾಶವನ್ನು
ಉಪಯೋಗಿಸಿಕೊಂಡು ಬಿಡಿ ಬಾಳಿಗೆ

ಮನದ ತುಂಬಾ ತುಂಬಿಕೊಳ್ಳಿ
ಪ್ರೀತಿ ಆತ್ಮೀಯತೆಯ ಕೃತಜ್ಞತೆಗೆ
ಹೆಜ್ಜೆ ಗುರುತು ಮೂಡಲಿ
ಜೀವಿತದ ಉತ್ಕಟತೆಗೆ
ಬದುಕಿನ ಭವಣೆಗಳ ಮೀರಿನಿಲ್ಲುವ
ಸಾಗಿ ಬಂದ ದಾರಿಯ ಸಾರ್ಥಕತೆಗೆ

ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರಕನ್ನಡ.

6 Responses

  1. ನವ್ಯಾ says:

    ಬದುಕಿನ ಸಾರ್ಥಕತೆಯ ಭಾವ ವ್ಯಕ್ತವಾದ ಕವನ ..ಚೆನ್ನಾಗಿದೆ ಸರ್..

  2. ಸಕಾರಾತ್ಮಕ ಕವನ ಚೆನ್ನಾಗಿದೆ ಸಾರ್

  3. ಪದ್ಮಾ ಆನಂದ್ says:

    ಚಂದದ ಸಂದೇಶ ಹೊತ್ತ ಸುಂದರ ಕವನ.

  4. ಶಂಕರಿ ಶರ್ಮ says:

    ಉತ್ತಮ ಸಕಾರಾತ್ಮಕ ಆಶಯವನ್ನು ಹೊತ್ತ ಕವನ ಚೆನ್ನಾಗಿದೆ.

  5. ನಯನ ಬಜಕೂಡ್ಲು says:

    ಭರವಸೆ ತುಂಬುವ ಸುಂದರ ಕವನ

  6. ನಾಗರಾಜ್ ಜಿ. ಎನ್. ಬಾಡ says:

    ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: