ಹಣತೆ ‌ಸಾಲೊಳು

Share Button

ಹಣತೆ ಸಾಲೊಳು
ಹಸಿ ಮಣ್ಣ ನೆನಪು
ಜೀವಿತದ ಸುತ್ತ
ನೆರಳಿನ ತಂಪು
ಮಣ್ಣಿನ ಕೌತುಕ
ಹಣತೆಯ ರೂಪ

ಹಣತೆ ‌ಸಾಲೊಳು
ಬೆವರಿನ ದೀಪ
ಕತ್ತಲೆಗೆ ಎಂದು
ಹಚ್ಚಿದರೂ ಹಣತೆ
ಬೆಳಗುವುದು ಜಗವ
ತಾನು ಉರಿದು
ಬೆಳಗುವ ಹಿರಿತನ
ಮನುಜನ ಬಾಳಿಗೆ
ನಿತ್ಯ ಸಿರಿತನ
ಇರುವಷ್ಟು ಹೊತ್ತು
ನಗುವೇ ಅದರ ಧ್ಯಾನ

-ನಾಗರಾಜ ಬಿ. ನಾಯ್ಕ, ಕುಮಟಾ.

17 Responses

  1. ಸರಳ ಸಂದರ ಅರ್ಥಪೂರ್ಣ ಕವನ..ಚೆನ್ನಾಗಿದೆ ಸಾರ್

  2. ಪದ್ಮಾ ಆನಂದ್ says:

    ಹಿರಿಯ ಅರ್ಥ ನೀಡುವ ಚಿಕ್ಕ ಕವನ.

  3. ಮುಕ್ತ c. N says:

    ಅರ್ಥ ಪೂರ್ಣಕವನ.

  4. MANJURAJ H N says:

    ಹಣತೆ ಸಾಲೊಳು
    ಬೆವರಿನ ದೀಪ !

    ಹೊಸ ಗ್ರಹಿಕೆ. ಎಷ್ಟೊಂದು ಅರ್ಥಸಾಧ್ಯತೆ.
    ಚೆನ್ನಾಗಿದೆ. ಚಿಂತಿಸುವಂತಿದೆ. ಧನ್ಯವಾದ ಮತ್ತು ಶುಭಗಳು.

  5. ಶಂಕರಿ ಶರ್ಮ says:

    ಅರ್ಥವತ್ತಾದ ಸುಂದರ ಸಾಲುಗಳು ಚಿಂತನಯೋಗ್ಯವಾಗಿವೆ.

  6. ನಾಗರಾಜ್ ಜಿ. ಎನ್. ಬಾಡ says:

    ಮಣ್ಣಿನ ಕೌತುಕ ಮತ್ತಷ್ಟು ಮಗೆದಷ್ಟು…

  7. ನಯನ ಬಜಕೂಡ್ಲು says:

    ಚೆನ್ನಾಗಿದೆ

  8. ಅರುಣ್ ಆಚಾರ್ಯ says:

    ಸುಂದರ ಕವಿತೆ

    ತಾನುರಿದು ಜಗಕೆ ಬೆಳಕು

    “ಜೀವಿತದ ಸುತ್ತ ನೆರಳಿನ ತಂಪು ” ಅದ್ಬುತ ಸಾಲು

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: