ಆಸ್ಪತ್ರೆ

Share Button

 

Sangeetha Raviraj

ಸಂಗೀತ ರವಿರಾಜ್

 

ತುರ್ತುಗಳ ನಡುವೆ ಸಂಯಮ
ಅನಿವಾರ್ಯ ಸರಕು
ದಿನತಪ್ಪಿದರೆ ಹದ ತಪ್ಪುವುದೀ ದೇಹ
ವೈದ್ಯರ ಪರಾಕು
ಇಲ್ಲಿ ಪದೇ ಪದೇ ಕಾಣುವ
ಪೇಲವ ಮುಖದ ನಲುಗುವ ಪಾದಗಳು
ನಿಲ್ಲಲಾರದೆ ಬಳಲುತ್ತಿದೆ ನೆರಳು !
ನಿಸ್ತೇಜದ ಜೋಡಿ ಕಂಗಳು
ದಿಟ್ಟಿಸುವ ಛಾವಣಿಯು
ಕರುಣೆ ತೋರದೆ
ಅರೆ ಅಕ್ಷಿಯ ಭಾವನೆಗಳ
ಶೂನ್ಯ ನೋಟದಲ್ಲು
ಇಂಚಿಂಚು ಆಶಾವಾದಗಳು………
ಚರಿತ್ರೆಯ ಮುಖವಾಡದಲ್ಲಿ ಬಳಲಿ
ಪ್ರಾಣ ಕೈಯಲ್ಲಿ ಹಿಡಿದ ರೋಗಿಗು
ಬದುಕಿ ಬರುವ ಚೈತನ್ಯ
ಜನ್ಮವಾಗಿದೆ ಜನ್ಯ !

wheel chairಗಾಲಿ ಕುರ್ಚಿಗಳ ಅತ್ತಿಂದಿತ್ತ ತಳ್ಳುತ್ತಾ
ಅರೆ ಬಿರಿದ ನಗುವಿನೊಂದಿಗೆ
ಓಡಾಡುವ ವಾರ್ಡ್ ಬಾಯ್
ಕ್ಯಾಂಟಿನ್ ಹುಡುಗನ ರಭಸಕ್ಕೆ
ಸಿಡಿಮಿಡಿಯುವ ಕಸಗುಡಿಸುವಾಕೆ
ಶಸ್ತ್ರ ಚಿಕಿತ್ಸೆ ಕೋಣೆಯೆದುರು
ಬೆವೆತ ಮುಖದಿ ಶತಪಥ ಹಾಕುವ ಆತ್ಮೀಯರು
ವೈದ್ಯರ ಹಿಂದೋಡಿ ಕೇಳುವ ಮಂದಿ
ಸುತ್ತಿ ಬಳಸಿ ನಡೆದಾಡಿ
ತಮ್ಮ ರೋಗಿಯ ಹುಡುಕುವವರೆಲ್ಲರು
ಕಾಣಸಿಗುವರು ಇಲ್ಲಿ
ಭಾವನೆಗಳಿಲ್ಲದ ಬರಿದು ಮುಖಗಳು……..

hospitalರೋಗಿಯೊಂದಿಗೆ ಉಳಿದ ಬಂಧು
ಒಂದರ್ಥದಲ್ಲಿ ಬೆಂದಂತೆ
ಲಿಫ್ಟ್ ಕೆಟ್ಟರೆ ಏದುಸಿರು ಅವಗಾಹಿಸಿ
ಊಟ, ಮೆಡಿಸಿನ್ ಎಂದೋಡಾಡಿ
ಸೊಳ್ಳೆಯೊಂದಿಗು ಸೆಣಸಾಡಿ
ಡ್ರಿಪ್ಸ್ ಮುಗಿದರೆಂಬ ಭಯದಿ
ಕಾದು ಕುಳಿತು ದಾದಿಯ ಕರೆದು
ಮುದುಡಿ ಮಲಗಿ ಬೆಳಗು ಮಾಡಿ
ಬಿಡುವು ನೋಡಿ ಪಕ್ಕದ ವಾರ್ಡ್‌ನ
ಕಷ್ಟ ಸುಖ ವಿಚಾರಿಸಿ
ಜೊತೆಯಲ್ಲಿ ನಿಡಿದಾದ ನಿಟ್ಟುಸಿರು ಬೆಟ್ಟದಷ್ಟು……..

ಎದೆ ಬಿಕ್ಕಿ ಅತ್ತಾಗ
ಆ ನೋವಿನಲ್ಲಿ ಬಾಳಿನರ್ಥ
ಹುಡುಕುವರೆಲ್ಲರು ಕಾಣಸಿಗುವರಿಲ್ಲಿ!

 

– ಸಂಗೀತ ರವಿರಾಜ್, ಕೊಡಗು

 

 

7 Responses

  1. Dinesh Naik says:

    ಚೆನ್ನಾಗಿದೆ.

  2. Uday kumar says:

    ಸೂಪರ್

  3. ASHOK Mijar says:

    ಅರ್ಥವತ್ತಾದ ಕವನ.

  4. maruti dasannavar says:

    ಕವಿತೆ ತುಂಬಾ ಸುಂದರವಾಗಿದೆ.ಪ್ರತಿಯೊಬ್ಬರನ್ನು ತಟ್ಟುವ ಅದ್ಭುತ ಕವಿತೆ. ಅಭಿನಂದನೆಗಳು.

  5. Krishnaveni Kidoor says:

    ಕವನ ವಾಸ್ತವದ ಸುತ್ತ ಹೆಣೆದಿದೆ .ಮತ್ತು ಸತ್ಯದ ಅನಾವರಣ .ಭ್ರಾಮಕ , ಅತಿರಂಜನೆಗಿಂತ ಇಂಥ ಕವನಗಳು ಹತ್ತಿರವಾಗುತ್ತವೆ ,ವೆ .ಗುಡ್ .

    • lingaraj vc says:

      ಚನ್ನಾಗಿ ಬರೆದಿದ್ದೀರಿ ಸಂಗೀತ ರವಿರಾಜ್ ಅವ್ರೆ ……….

  6. sangeetha raviraj says:

    Aelrigu vandanegalu

Leave a Reply to Uday kumar Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: