ಬೆಳಕು-ಬಳ್ಳಿ

”ಲಕ್ಷ್ಮಣ ರೇಖೆ”

Share Button

ಸೀತೆಗೆಂದು ಎಳೆದನು
ಲಕ್ಷ್ಮಣನೊಂದು ರೇಖೆ
ರಕ್ಷಣೆಗೆಂದು….
ಮರೆತು ದಾಟಿದ
ತಪ್ಪಿಗೆ …ಆಯಿತು
ರಾಮಾಯಣ…..

ಇಂದು
ನಾವೇ ಹಾಕಿಕೊಳ್ಳಬೇಕು
ನಮ್ಮೊಳಗೊಂದು ರೇಖೆ,
ನಮ್ಮನ್ನಾಳುವ  ಅಹಂಕಾರಕ್ಕೆ
ಗೆರೆ ಹಾಕಿ…..
ಹೊರ ಬರದಂತೆ…
ರೇಖೆ ದಾಟದಂತೆ…

ನಮ್ಮ ಸಂತೋಷಗಳ ಶತೃ
ಅಸೂಯೆ ಅತೃಪ್ತಿ ದುರಾಸೆಗೆ
ನಾವೇ ಹಾಕಬೇಕು ರೇಖೆಯೊಂದನು
ಒಳಗೆ ಇರುವಂತೆ…
ಹೊರಬಂದು….
ಕಲಕಿ ರಾಡಿಗೊಳಿಸದಿರಲೆಂದು…

ನಮ್ಮೊಳಗೆ ನಾವೇ
ಹಾಕಿಕೊಳ್ಳಬೇಕು
“ಲಕ್ಷ್ಮಣ ರೇಖೆ”
ಒಳಿತು ಕೆಡಕುಗಳ ನಡುವೆ…..

-ವಿದ್ಯಾ ವೆಂಕಟೇಶ್. ಮೈಸೂರು

6 Comments on “”ಲಕ್ಷ್ಮಣ ರೇಖೆ”

  1. ಸರಳ ಸುಂದರ ಕವನ ಚೆನ್ನಾಗಿದೆ ಸೋದರಿ . ಅರ್ಥಪೂರ್ಣ ವಾದ ಸಂದೇಶ ನೀಡಿದೆ.

  2. “ನಮ್ಮೊಳಗೆ ನಾವೇ ಹಾಕಿಕೊಳ್ಳಬೇಕು “ಲಕ್ಷ್ಮಣ ರೇಖೆ” ಒಳಿತು ಕೆಡಕುಗಳ ನಡುವೆ….. ” ಈ ಸಾಲು ಸಾರ್ವಕಾಲಿಕ ಸತ್ಯ. ಕವನ ಬಹಳ ಇಷ್ಟವಾಯಿತು.

  3. ಚಂದದ ಕವನ…ನಾವು ಎಲ್ಲೆಲ್ಲಿ ಲಕ್ಷ್ಮಣ ರೇಖೆಯನ್ನು ಹಾಕಬೇಕೆಂಬುದನ್ನು ಮನಮುಟ್ಟುವಂತೆ ಬಿಡಿಸಿಟ್ಟಿದೆ.

Leave a Reply to Priyanka Cancel reply

 Click this button or press Ctrl+G to toggle between Kannada and English

Your email address will not be published. Required fields are marked *