ಜೀವಾಮೃತ

Share Button

 
ಬಾ ಮಳೆಯೆ ಇಳೆಗಿಳಿಯೆ ನೀ ಮೆಲ್ಲನೆ  l
ಹನಿ ಹನಿ ಸೇರಿ ಹೊಳೆಯಾಗಿ ಹರಿದು ಬಾ ನೀ ಸುಮ್ಮನೆ.

ಹರಿದು ಬಂದ ನೀರನುಂಡು ತಂಪದಾಗಲೇ
ಧರೆಯಲಿರುವ ಕಸವು ಕರಗಿ ಕಸುವಾದ ಈ
ಮೃತ್ತಿಕೆಯೊಳು ಸಸ್ಯಶಾಮಲೆ ಮತ್ತೆ ಕಣ್ತೆರೆವಳು

ಹರಿಯುವ ಈ ನೀರಿನ ಹನಿಹನಿಯು ಅಮೃತವು
ಅಮೃತದ ಈ ಹನಿಹನಿಯು ಜೀವಾಮೃತವು
ಜಲವೆ ಸಕಲ ಜೇವರಾಶಿಗು ಮೂಲ ಜೀವಸೇತು.

ಇಳೆಗಿಳಿಯುವ ಮಳೆ ಹನಿಗೆ ಕುಲ ಯಾವುದು ?
ಹರಿಯುವ ಜಲಧಿಗೆ ಬೆಡಗು ಅದಾವುದು ?
ಮೇಲೇರುತಿಹ ನೀರಾವಿಗ್ಯಾವ ಜಾತಿಯೋ  ?

ಮಣ್ಣಿನ ಆಳಕ್ಕಿಳಿದ ಜಲವದು ಅಂತರ್ಜಲವಾಯ್ತು
ಭುವಿಯ ಮೇಲರಿಯುವ ನೀರದು ಜೀವರಾಶಿಗುಪಕಾರಿಯಾಯ್ತು
ಧ್ರುವಪ್ರದೇಶದ ಜಲಧಿಯದು ಘನೀಕರಣವಾಯ್ತು.

– ನಾಗರಾಜ್ ಕಾಳೆ

7 Responses

  1. ನಾಗರತ್ನ ಬಿ. ಅರ್. says:

    ಉತ್ತಮ ಸಂದೇಶವನ್ನು ಸಾರುವ ಕವನ ಸುಂದರ ವಾಗಿದೆ ಮೂಡಿ ಬಂದಿದೆ ಅಭಿನಂದನೆಗಳು ಸಾರ್

  2. Padma Anand says:

    ಇಳೆಯ ಜೀವ ಮಳೆಯ ಸೊಗಸಾದ ವರ್ಣನೆ.

  3. ನಯನ ಬಜಕೂಡ್ಲು says:

    ಸುಂದರವಾದ ಕವನ.

  4. ಶಿವಮೂರ್ತಿ.ಹೆಚ್. says:

    ಸುಂದರ ಕವನ ಸರ್

  5. Anonymous says:

    ಇಳೆಯ ಕೊಳೆ ತೊಳೆವ ಮಳೆ ಕಳೆ ತರಿಸುವ ಮಳೆ ಬಗ್ಗೆ ಸೊಗಸಾದ ಕವನ

    ಸುಜಾತಾ ರವೀಶ್

  6. ಶಂಕರಿ ಶರ್ಮ says:

    ಜೀವಜಲದ ವಿವಿಧ ಆಯಾಮಗಳ ಬಗೆಗಿನ ಕವನ ಸೊಗಸಾಗಿದೆ.

  7. padmini says:

    ನಿಜ, ಜಲವೆ ಸಕಲ ಜೇವರಾಶಿಗು ಮೂಲ ಜೀವಸೇತು!

Leave a Reply to ನಾಗರತ್ನ ಬಿ. ಅರ್. Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: