ಜಗವೆಲ್ಲಾ ನಿಮ್ಮದೇ

Share Button

ಕೊಲ್ಲದಿರಿ  ಮೆಲ್ಲ ಮೆಲ್ಲನೆ ನಿಮ್ಮ ಮನದೊಳಗಿನೆಲ್ಲ ಕನಸುಗಳನ್ನ
ಬಳಸಿರೆಲ್ಲ ಒಳ್ಳೆಯ ಮೂಲಗಳನ್ನ ಪ್ರಯತ್ನ ಕೈಬಿಡುವ ಮುನ್ನ

ಹುಮ್ಮಸ್ಸಿದ್ದವರು ಹೊರಡುತ್ತಾರೆ ಹಿಡಿಯೆ ಮಳೆಬಿಲ್ಲನ್ನ
ಕೈಚೆಲ್ಲಿ ಕೂರದಿರಿ ಮಾಡದೇ
ಯಾವ ಪ್ರಯತ್ನ

ಏರಿ ಮೇಲೆ ಸಣ್ಣ ಸಣ್ಣ ಮೆಟ್ಟಿಲು ಮೆಟ್ಟುತ್ತ
ಎರೆಹುಳ ಸಿಕ್ಕಿದರೆ ಮುಂದೆ ಸಾಗಿ ಅದರಿಂದ ಮೀನು ಹಿಡಿಯುತ್ತ

ನಮಗಲ್ಲವಿದು ಜಗವು
ಎನ್ನದಿರಿ ವಿಧಿಯ ಹಳಿಯುತ್ತ
ಮನಸು ಮಾಡಿ ಹೊರಟರೆ
ನಿಮ್ಮದೇ ಈ ಜಗವೆಲ್ಲಾ ಖಂಡಿತ

-ನಟೇಶ (ಬಿ ಸಿ ನಾರಾಯಣ ಮೂರ್ತಿ)

4 Responses

  1. Jalaja Rao says:

    ಸ್ಪೂರ್ತಿದಾಯಕ . ಪ್ರಯತ್ನವಿಲ್ಲದೆ ಏನು ಆಗದು ಎಂಬ ಸಂದೇಶವಿರುವ ಪದ್ಯ. ಆಶಾವಾದ ಹೊರಹೊಮ್ಮುವ ನುಡಿಗಳು ಇಷ್ಟವಾಯಿತು.

  2. Padma Anand says:

    ಪ್ರಯತ್ನದ ಪ್ರಾಮುಖ್ಯತೆಯನ್ನು ಚಿಕ್ಕದಾದರೂ ಚೊಕ್ಕವಾಗಿ, ಗಟ್ಟಿಯಾಗಿ ಹಿಡಿದಿಟ್ಟಿದ್ದೀರಿ

  3. ಶಂಕರಿ ಶರ್ಮ says:

    ವಿಧಿಯನ್ನು ಹಳಿಯದೆ, ಸ್ವಪ್ರಯತ್ನದಿಂದ ಮುಂದುವರಿಯಬೇಕೆಂಬ ಸತ್ವಯುತ ಸಂದೇಶ ಹೊಂದಿರುವ ಚಂದದ ಕವನ.

  4. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ, ಸ್ಫೂರ್ತಿ ತುಂಬುವ ಸಾಲುಗಳು

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: