ಮುನ್ನ

Share Button

ನೇಸರ ಮೂಡುವ ಮುನ್ನ
ಹಾಸಿಗೆ ಬಿಟ್ಟು ಏಳಬೇಕು
ಹೊಸಿಲು ದಾಟುವ ಮುನ್ನ
ಪಶುಪತಿಯ ನೆನೆಯಬೇಕು.

ತಾಸು ಕಳೆಯುವ ಮುನ್ನ
ಕಾಸನು ದುಡಿದು ಗಳಿಸಬೇಕು.
ಉಸಿರು ನಿಂತು ಹೋಗುವ ಮುನ್ನ
ಹಸುವಂಗೆ ನಾವು ಬಾಳಬೇಕು.

ಐಸಿರಿ ಬರಿದಾಗುವ ಮುನ್ನ
ತುಸು ದಾನಧರ್ಮ ಮಾಡಬೇಕು
ನಸೀಬು ಕೈಕೊಡುವ ಮುನ್ನ
ರಿಸಿಯಂತೆ ನಾವಾಗಬೇಕು.

ಹುಸಿ ನುಡಿಯಾಡುವ ಮುನ್ನ
ವಸಿ ಯೋಚಿಸಿ ಆಡಬೇಕು
ಕೆಸರು ಎರಚುವ ಮುನ್ನ
ಕಸಿವಿಸಿಯಾಗುವುದ ತಿಳಿಬೇಕು.

ಮೊಸರು ಮಜ್ಜಿಗೆ ಮಾಡುವ ಮುನ್ನ
ಕಡೆದು ಬೆಣ್ಣೆಯ ತೆಗೆಯಬೇಕು.
ಸಸಿಯ ಬೀಜ ಬಿತ್ತುವ ಮುನ್ನ
ಕೃಷಿ ಭೂಮಿಯ ಸತ್ತ್ವವರಿಯಬೇಕು.

ಬಾಳಿನ ಗುರಿಯ ಶಿಖರವೇರುವ ಮುನ್ನ
ಕಲ್ಲುಮುಳ್ಳಿನ ದಾರಿಯ ತುಳಿಯಬೇಕು
ಶಿವನ ಮಾತಿಗೆ ಹೌದೆನ್ನುವ ಮುನ್ನ
ಜೀವನ ತತ್ತ್ವಗಳನು ಪಾಲಿಸಬೇಕು.

-ಶಿವಮೂರ್ತಿ.ಹೆಚ್ , ದಾವಣಗೆರೆ. 

10 Responses

  1. ನಯನ ಬಜಕೂಡ್ಲು says:

    ಸೊಗಸಾದ ಕವನ. ಮೌಲ್ಯಯುತ ಬದುಕಲ್ಲಿ ಅನುಸರಿಸಬೇಕಾದ ಸರಳ, ಸುಂದರ ವಿಚಾರಗಳು

    • ಶಿವಮೂರ್ತಿ.ಹೆಚ್. says:

      ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಸದಾ ಚಿರ ಋಣಿ ಮೇಡಂ.

  2. Meghana Kanetkar says:

    ಅರ್ಥಪೂರ್ಣ

    • ಶಿವಮೂರ್ತಿ.ಹೆಚ್. says:

      ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಸದಾ ಚಿರ ಋಣಿ ಮೇಡಂ

  3. ಬಿ.ಆರ್.ನಾಗರತ್ನ says:

    ಸರಳ ನಿರೂಪಣೆಯ ಸುಂದರ ಕವನ.

    • ಶಿವಮೂರ್ತಿ.ಹೆಚ್. says:

      ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಸದಾ ಚಿರ ಋಣಿ ಮೇಡಂ

  4. Anonymous says:

    ಮುನ್ನ,,,, ಹೌದು,,, ಎಲ್ಲರೂ ಒಮ್ಮೆ ಯೋಚಿಸಿ,
    ಪಾಲಿಸಬೇಕು,,,
    ವಿದ್ಯಾ

    • ಶಿವಮೂರ್ತಿ.ಹೆಚ್. says:

      ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಸದಾ ಚಿರ ಋಣಿ ಮೇಡಂ

  5. ಶಂಕರಿ ಶರ್ಮ says:

    ಬದುಕಿನಲ್ಲಿ ಯಾವುದಕ್ಕೆಲ್ಲಾ ಪ್ರಾಮುಖ್ಯತೆ ಕೊಡಬೇಕೆನ್ನುವುದರ ಬಗೆಗೆ ತಮ್ಮ ಸೂಕ್ಷ್ಮ, ಸಂವೇದನಾಪೂರ್ಣ ಕವನವು ಮನಮುಟ್ಟುವಂತೆ ತಿಳಿಯಪಡಿಸಿದೆ.

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: