ತೆರಳದಿರಲಹುದೇ…

Share Button

ಬೆಳಗುತಿಹ ದಿನಕರನು
ಸೆಳೆಯುತಲಿ ಮೇದಿನಿಯ
ಮುಳುಗದೆಯೆ ಬಾನಿನಲಿ ನಿಲ್ಲಲಹನೇ|
ಬಿಳುಪಾದ ಚಂದಿರನು
ಹೊಳೆಯುತಿರೆ ಗಗನದಲಿ
ಕಳೆಗುಂದಿ ಸೊರಗುತಲಿ ಬಾಡದಿಹನೇ||

ಬಿರಿಯುತಲಿ ಕಂಗೊಳಿಸಿ
ಮೆರೆಯುತಿಹ ಸುಮರಾಜಿ
ಬರಿದಾಗಿ ಸಂಜೆಯಲಿ ಮುದುಡದಿಹುದೇ|
ಹರಿಯುತಿಹ ಹೊಳೆಯೊಂದು
ಸರಿಯುತಿರೆ ಕಡಲೆಡೆಗೆ
ಧರೆಯಲ್ಲಿ ತೊಡರುಗಳ ಕಾಣದಿಹುದೇ ||

ಮುಗಿಲೊಡಲ ಜಲರಾಶಿ
ಜಿಗಿಯುತಲಿ ಮಳೆಯಾಗಿ
ಯುಗಯುಗದಿ ವಸುಧೆಯನು ತೊಳೆಯದಿಹುದೇ|
ಹೊಗಳದೆಯೆ ಹಾಡುತಿಹ
ಖಗರಾಣಿ ಕೋಗಿಲೆಯು
ಸೊಗಸಾದ ಗಾನವನು ಹಾಡದಿಹುದೇ ||

ಬವಣೆಯಲಿ ಬೇಯದೆಯೆ
ಭವದೊಳಗೆ ಬಾಳುತಲಿ
ತವರಾಜ ಮೆಲುವವನ ಕಾಣಲಹುದೇ|
ಭವನದೊಳು ಮೆರೆದರೂ
ಜವರಾಯ ಕರೆದಾಗ
ಭುವನವನು ಬಿಟ್ಟು ತೆರಳದಿರಲಹುದೇ ||

(ಕುಸುಮ ಷಟ್ಪದಿ)

-ಪರಿಣಿತ ರವಿ

  

3 Responses

  1. Savithri bhat says:

    ಕವನ ಬಹಳ ಇಷ್ಟವಾಯಿತು..ಯಾವುದೇ ಒತ್ತಕ್ಷರ ಇಲ್ಲದೆ ಕುಸುಮ ಷಟ್ಪದಿ ಯಲ್ಲಿ ಬರೆದುದು ಭಾವಗೀತೆ ಯಂತೆ ರಾಗವಾಗಿ ಹಾಡು ವಂತೆ ಇದೆ

  2. Asha nooji says:

    SUPER

  3. ಶಂಕರಿ ಶರ್ಮ says:

    ‌ಸೊಗಸಾದ ಕವನ.

Leave a Reply to Savithri bhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: