‘ದ್ವಂದ್ವ’

Share Button

ಇತ್ತೀಚೆಗೆ ನನ್ನೂರಲ್ಲಿ ನವಿಲುಗಳು
ಹೆಚ್ಚಾಗಿರುವ ಸುದ್ದಿಗೆ
ಸಂಭ್ರಮಿಸುವುದೋ ವಿಷಾದಿಸುವುದೋ
ತಿಳಿಯಲಾಗುತ್ತಿಲ್ಲ ಬುದ್ಧಿಗೆ.

ನವಿಲುಗಳು ಸರಿ, ನವಿಲಿನಾಹಾರ
ಹಾವು- ಹುಳು- ಉಪ್ಪಟೆಗಳೂ
ಹೆಚ್ಚಾದುವೇ ಹೇಗೆ..?
ಈಗ ಹೇಳಿ, ಚೆಂದ ಕುಣಿತ,
ಕಣ್ಮನ ತಣಿತಕೆ ನವಿಲುಗಳಿರಲಿ
ಎನ್ನುವುದೇ ಹೇಗೆ..!

ಇದಾಗದೇ ಕಂಡೂ ಕಂಡೂ ವಿಷ
ಕುಕ್ಕುವ ಹಾವಿಗೇ ಕೊಡಪಾನ
ಹಾಲೆರದ ಹಾಗೆ..!

ವಸುಂಧರಾ ಕದಲೂರು.

4 Responses

  1. ಧರ್ಮಣ ಧನ್ನಿ says:

    ಕವನ ಚೆನ್ನಾಗಿದೆ. ನಿಮ್ಮೂರಿನ ವಿಷಯ ಇದೆ.ಧನ್ಯವಾದಗಳು

  2. ನಯನ ಬಜಕೂಡ್ಲು says:

    ಪ್ರಕೃತಿಯ ಮಡಿಲೇ ಸುಂದರ, ಇಲ್ಲಿ ಎಲ್ಲವೂ ಒಂದರ ಮೇಲೊಂದು ಅವಲಂಬಿತ, ಪ್ರಕೃತಿಯೇ ಇಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತಾಳೆ, ಹಾಗಾಗದೆ ಇದ್ದಾಗ ಮಾತ್ರ ಅವಘಡಗಳು ಸಂಭವಿಸುತ್ತವೆ. Nice madam ji.

  3. Nagraj Harapanahalli.karwar says:

    ಧ್ವನಿಪೂರ್ಣ ಕವಿತೆ

  4. Anonymous says:

    ಪ್ರಕೃತಿ ಸಮತೋಲನ ಬಗ್ಗೆ ಭಾವಪೂರ್ಣ ಕವನ

Leave a Reply to ಧರ್ಮಣ ಧನ್ನಿ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: