ಮಸಣ

Share Button

ಇಲ್ಲಿಗೆ ಬರಲು ಬಯಸುವುದಿಲ್ಲ ಮನುಜ
ಬಯಸಿದರೂ ಇಲ್ಲಿರಲು ಸಾಧ್ಯವಿಲ್ಲ
ನಗುವೆನೆಂದರೂ ಇಲ್ಲಿ ನಗಲಾಗುವುದಿಲ್ಲ
ಅಳಲಾರೆನೆಂದರೂ ತಡೆಯುವ ಶಕ್ತಿಯಿಲ್ಲ

ಕನಸಿನಲ್ಲೂ ನನ್ನ ಕಾಣಬಯಸುವುದಿಲ್ಲ
ನಾನು ಕನಸಾಗಿಯೇ ಇರಬೇಕೆನ್ನುವ
ಎಂದೂ ನನಸಾಗದ ತಿರುಕನ ಕನಸು
ಕಾಣುತ್ತಲೇ ಕಾಲಿಡುವ ಮರುಳ

ಬರುವ ವಾಹನಗಳು ಬೇರೆ ಬೇರೆ ಇರಬಹುದು
ಆಚರಣೆಗಳು ನೂರಿರಬಹುದು
ಎಲ್ಲರನು ಸಮನಾಗಿ ಪಂಚಭೂತಗಳಲ್ಲಿ
ಸೇರಿಸುವ ಕಾಯಕ ಮಾತ್ರ ನನ್ನದು

ಬಡವ-ಬಲ್ಲಿದನೆಂಬ ವ್ಯತ್ಯಾಸವಿಲ್ಲ
ಪಾಪಿ-ಪುಣ್ಯವಂತನೆಂದು ನೋಡಲಾರೆ
ಗಂಡು-ಹೆಣ್ಣು ಎಂಬ ತಾರತಮ್ಯವಿಲ್ಲ
ಹಿರಿ-ಕಿರಿಯರೆಂಬ ಭೇದ ಮಾಡೆನು

ಕೋಟಿ ಕೊಪ್ಪರಿಗೆಯ ಸರದಾರನಿರಲಿ
ಇಲ್ಲಿಗೆ ಬರುವಾಗ ಖಾಲಿಜೋಳಿಗೆಯ ಫಕೀರನೇ
ನಿನ್ನವರೆಲ್ಲಾ ನಿನ್ನವರಲ್ಲ ಎಂಬ ನಗ್ನಸತ್ಯ
ಅರಿವಾಗುವುದೇ ಒಬ್ಬೊಂಟಿ ಮಣ್ಣಾಗುವಾಗ

ಅರಮನೆಯ ಒಡೆಯನೇ ಆದರೂ
ಹೆಣವಾದೊಡನೆ ಹೊರಹಾಕುವರು
ಆದರಿಸಿ ನನ್ನಂಗಳದಲಿ ಬರಮಾಡಿಕೊಳುವೆ
ನನ್ನೊಳಗಣ ಆರೂ ಮೂರರ ಅರಸನಿಗೆ

ಬದುಕಿದ್ದಾಗ ನೂರು ವಿಳಾಸಗಳಿರಬಹುದು
ಕೊನೆಗೆಲ್ಲರ ಖಾಯಂ ವಿಳಾಸ ಮಾತ್ರ ಕೇವಲ ನಾನು!

-ನಳಿನಿ. ಟಿ. ಭೀಮಪ್ಪ , ಧಾರವಾಡ

16 Responses

  1. ಅಂಬ್ರೀಶ್ says:

    ಚೆನ್ನಾಗಿದೆ

  2. Parvathikrishna says:

    ಜೀವನದ ಕಟುಸತ್ಯ.ಚೆನ್ನಾಗಿ ಬರೆದಿರುವಿರಿ.

  3. nalini bheemappa says:

    dhanyavaadagalu

  4. ನಯನ ಬಜಕೂಡ್ಲು says:

    ತುಂಬಾ ಚಂದದ ಕವನ, ಬದುಕಿನ ಸತ್ಯದ ಅನಾವರಣ,

  5. Anonymous says:

    ಬಹಳ ಸುಂದರ ಕವಿತೆ ಮೆಡಮ್

  6. ಆಶಾನೂಜಿ says:

    super

  7. Anonymous says:

    ಚೆನ್ನಾಗಿದೆ ಮೇಡಂ

  8. ಧರ್ಮಣ ಧನ್ನಿ says:

    ಕವನದ ಸಾಲುಗಳು ಮತ್ತೆ ಮತ್ತೆ ಓದಿಸಿಕೊಂಡು ಹೊಗುತ್ತದೆ.ಧನ್ಯವಾದಗಳು

  9. Anonymous says:

    ಎಷ್ಟು ಮೆರೆದಾಡಿದರೂ, ಎಲ್ಲವೂ ನಶ್ವರ.. ಕೊನೆಯ ತಾಣವನ್ನು ನೆನಪಿಸುವ ಭಾವನಾತ್ಮಕ ಕವನ ಚಿಂತನೆಗೆ ಹಚ್ಚುವಂತಿದೆ…ಧನ್ಯವಾದಗಳು.

  10. nalinibheemappa says:

    dhanyavaadagalu

  11. Anonymous says:

    ತುಂಬಾ ಚೆನ್ನಾಗಿದೆ ಮೇಡಂ

Leave a Reply to nalini bheemappa Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: