ಸಂಕ್ರಾಂತಿ ಸರಿಗಮ

Share Button

ಬರುತಲಿದೆ ಸಂಕ್ರಾಂತಿ
ಹೊಸವರುಷದ ಉತ್ಸಾಹ ಚಿಗುರೊಡೆಯುತಿದೆ..
ಹೊಲದ ಸುತ್ತ ಹಸಿರ ತೆನೆಯು ಉಕ್ಕುತಿದೆ
ಹೊಸ ಚಿಲುಮೆಯ ಚಿತ್ತಾರ ಬಿತ್ತಿದೆ

ವರುಷಗಳ ಕಷ್ಟಗಳ ಹೊತ್ತು ಬೆಳೆಸಿದ
ಅನ್ನದಾತನ ಮನವು ಹಿಗ್ಗಿದೆ
ಹೊಸ ಹರುಷದ ಹೊಸತನದ
ಕಾಮನ ಬಿಲ್ಲು ಜಗದಲಿ ಚಾಚಿದೆ.

ಅಸ್ಸಾಮಿನ ನೆಲದಲಿ ಚೆಲುವೆಯರ ನೃತ್ಯದ
ನಾಟ್ಯಧಾಮ ರಂಗೇರುತಿದೆ.
ಕನ್ನಡ ನೆಲದಲಿ ಎಳ್ಳು ಬೆಲ್ಲದ ಮಂದಹಾಸವು
ಬದುಕಿನ ಹೊಸ ಸರಿಗಮ ಬರೆಯುತಿದೆ

ತಮಿಳಿನ ಜಲ್ಲಿಕಟ್ಟುವಿನ ರಣದ ಅಬ್ಬರ ಶುರುವಾಗಿದೆ
ಉತ್ತರದ ದಿಕ್ಕಿನಲಿ ಸಿಹಿಯ ಸ್ಪರ್ಶ ಸಂಗಮವಾಗಿದೆ
ಗಾಳಿಪಟಗಳು ಸೂರ್ಯನ ತೇಜೋಮಂಡಲಕೆ ಗುರಿ ಇಟ್ಟಿವೆ
ಜಗದ ಜನರ ಮನದಲಿ ಹೊಸ ಉತ್ಸಾಹ ಉಕ್ಕಿದೆ.

– ರಾಘವ್ ರಾವ್

3 Responses

  1. ASHA nooji says:

    SUPER

  2. ನಯನ ಬಜಕೂಡ್ಲು says:

    ಕವನದ ತುಂಬಾ ಹಬ್ಬದ ವಾತಾವರಣ. Nice

  3. Shankari Sharma says:

    ಫುಲ್ ಸಂಕ್ರಾಂತಿ ನೋಡಿದ ಹಾಗಾಯ್ತು!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: