ಧಾರವಾಡ ಸಾಹಿತ್ಯ ಸಂಭ್ರಮ

Share Button

ಕನ್ನಡದ ಕಂಪನ್ನು ಹರಡಿಸುವ ಸಂಭ್ರಮ,
ಇದುವೆ ಇದುವೆ ಸಾಹಿತ್ಯ ಸಂಭ್ರಮಾ,
ಧಾರವಾಡ ಸಂಭ್ರಮಾ.
ಸಾಹಿತ್ಯ ಸಂಭ್ರಮಾ…
ಮನೋಹರ ಗ್ರಂಥಮಾಲೆ ಪ್ರಾರಂಭಿಸಿರುವ ಸಂಭ್ರಮಾ,
ಗಿರಡ್ಡಿಯವರ ಸಾರಥ್ಯದಲಿ ಮೂಡಿಬರುವ ಸಂಭ್ರಮಾ.
ಈ ಸಂಭ್ರಮಾ ಎಲ್ಲರಾ ಮನವನೂ ಗೆದ್ದು ಮುನ್ನಡೆದಿದೆ..
ನಿಲ್ಲದಿರಲಿ ಈ ಸಂಭ್ರಮಾ..
ಗುಣಮಟ್ಟದ ವಿಷಯಗಳಿರುವಾ ಗೋಷ್ಠಿಗಳ ಸಂಭ್ರಮಾ,
ಸಾಹಿತ್ಯ ದಿಗ್ಗಜರ ಸಂವಾದ ಸಂಭ್ರಮಾ
ಮೂರು ದಿನಗಳೂ ನಡೆಯುವಾ ಈ ಉತ್ಸವಾ,
ನೋಡಿ ಅನುಭವಿಸುವದೇ  ಸಂಭ್ರಮಾ….
ಸಮಯ ಪರಿಪಾಲನೆಯನು ಮಾಡುವ಼ಂಥ ಸಂಭ್ರಮಾ.
ಸೊಗಸಾದ ನಿರೂಪಣೆಗೆ ಹೆಸರಾದ ಸಂಭ್ರಮಾ,
ಸಾಹಿತ್ಯದಾಸಕ್ತಿಯಾ ಜನರಿಗೆ,
ಬ಼ಂದೊದಗಿದಾ ಸಂಭ್ರಮಾ…
ವಿಧವಿಧದ ಪುಸ್ತಕದ ಮಳಿಗೆಗಳ ಸಂಭ್ರಮಾ,
ಉತ್ತರ ಕರ್ನಾಟಕ ಶೈಲಿಯ ಭೋಜನದ ಸಂಭ್ರಮಾ,
ನಾಡಿನಾ ಸೊಗಡನು ಜನತೆಗೆ,
ಪರಿಚಯಿಸುವ ಸುಂದರ ಸಂಭ್ರಮಾ…
– ಮಾಲತೇಶ ಹುಬ್ಬಳ್ಳಿ
.

1 Response

  1. Ranganath Nadgir says:

    ಪ್ರೀಯ ಮಾಲತೇಶ್ ,ಕವಿತೆ ಸಮಯೋಚಿತವಾಗಿದ್ದು ಚೆನ್ನಾಗಿ
    ಮೂಡಿ ಬಂದಿದೆ .ಸಂಭ್ರಮಕ್ಕಾಗಿ ದುಡಿದ ಎಲ್ಲ ನಿಸ್ವಾರ್ಥ ಜನರಿಂದ
    ಮಾತ್ರ ಇಂಥ ಸಂಭ್ರಮಗಳ ಆನಂದ ಅನುಭವಿಸುವ ಅವಕಾಶ
    ಸಿಕ್ಕಿದ್ದು ನಮ್ಮೆಲ್ಲರ ಸುದೈವ ಅಲ್ಲವೆ?
    ಧನ್ಯವಾದಗಳೊಂದಿಗೆ, ರಂಗಣ್ಣ ನಾಡಗೀರ, ಕುಂದಗೋಳ

Leave a Reply to Ranganath Nadgir Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: