ಕೃಷ್ಣಾ ನೀ ಬೇಗನೇ ಬಾರೋ

Share Button

ಭಾವನೆಗಳು ಮನದೊಳುಕ್ಕಿ
ನೆನೆಯಲೊಂದು ಸುದಿನ ಸಿಕ್ಕಿ
ಕಾದಿಹರಲ್ಲಲ್ಲಿ ಹಿಡಿದವಲಕ್ಕಿ
ಬಾಲ್ಯದಿನಗಳ ನೆನಪುಗಳ ಹೆಕ್ಕಿ

ಇತ್ತಿದ್ದನಂದು ಅವಲಕ್ಕಿ ಮೊಸರು
ಗೆಳೆತನಕ್ಕೆ ಮುದ್ದುಕೃಷ್ಣ ಉಸಿರು
ಸ್ನೇಹವಲ್ಲಿ ಶಾಶ್ವತವಾಗಿ ಹಸಿರು
ಅಮರವಿಲ್ಲಿ ಕುಚೇಲನ ಹೆಸರು

ರಾಧೆಯೊಡಗೂಡಿ ಬಂದ
ಕೃಷ್ಣನೆನುವುದೇ ಚೆಂದ
ಕೊಳಲನೂದುವ ಅಂದ
ಭಕುತರಿಗೆ ಬಲವನು ತಂದ

ರುಕ್ಮಿಣಿ-ಭಾಮೆ ಹದಿಬದೆ
ಪ್ರೀತಿಗೊಲಿಸಲಲ್ಲಿ ರಾಧೆ
ನಲಿದು ಮುಗಿವವರೆದೆ
ಒಲುಮೆಗೆ ಭಕುತಿ ಸುಧೆ

ಬಂತು ಮತ್ತೊಂದು ಅಷ್ಟಮಿ
ವಸುದೇವ ಸುತ ನಮಾಮಿ
ಯಶೋದಾಕುವರ ಗೋಪ್ರೇಮಿ
ಪದತಲದಲ್ಲಿಹೆ ರಕ್ಷಿಸು ಸ್ವಾಮಿ

.’

– ಗಣೇಶಪ್ರಸಾದ ಪಾಂಡೇಲು

1 Response

  1. Shankari Sharma says:

    ಕವನ ಚೆನ್ನಾಗಿದೆ

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: