ಬೆಳಕು-ಬಳ್ಳಿ

ಭೂಮಿಗೊಂದು ಛತ್ರಿ..ಓಝೋನ್

Share Button

ಸೂರ್ಯನ ಬೆಳಕು ಧರಣಿಗೆ ಚೇತನ
ಜೀವಕೋಟಿಗೆ ಅವಶ್ಯವು
ಅವನ ನೇರಳೆಯ ನೇರ ಕಿರಣವು
ಬೀಳಲು ಪ್ರಥ್ವಿಗೆ ಮಾರಕವು//

ನೇರ ಕಿರಣವು ಬೀಳದೆ ಇರಲು
ಹಬ್ಬಿದೆ ತೆಳವಾದ ಪರದೆಯು
ಅದುವೆ  ಓಝೋನ್  ಪದರವೆ ಆಗುತ
ಪ್ರಕೃತಿ ಗಾಗಿದೆ ರಕ್ಷಣೆಯು//

ಪರಿಸರ ಮಲಿನತೆ ಹೊಗೆಯನು ಉಗುಳಿ
ರಂದ್ರ ಬೀಳುತಿದೆ ಪರದೆಯಲಿ
ತೂತಿನ ಮೂಲಕ ಭೂಮಿಗೆ ಬರುತಿದೆ
ನೇರ ಕಿರಣವು ವೇಗದಲಿ//

ಕಾಡನು ಕಡಿದಿಹ ಫಲವಿದು ಎಂದು
ಮರುಗಲು ಬೇಕಿದೆ ಎಲೆಮನುಜ
ಸಾವು ನೋವುಗಳ ಹೊತ್ತು ತರುತಲಿ
ಪ್ರಕೃತಿಗೆ ಆಗಿದೆ ನಷ್ಟಸಹಜ//

ಕಾಣುತಲಿರುವವು ಸಾವಿರ ಸಾವಿರ
ಭಯವನು ಹುಟ್ಟಿಸೋ ರೋಗಗಳು
ನೇರಳೆ ಕಿರಣದ  ಭೀಕರ ಪರಿಣಾಮ
ಕಾಡುತಲಿಹವು ಸಾವುಗಳು//

ಹೊಗೆಯನು ಉಗುಳುವ ಕಾರ್ಖಾನೆ
ಮೋಟಾರು ವಾಹನದ ತಲೆಬಿಸಿಯು
ಎಣೆಯೇ ಇಲ್ಲದ ಮಾಲಿನ್ಯದಿಂದ
ಬದುಕಿನ ಗೆಲುವಿನ ಚಿಂತೆಯು//

ಬಿಸಿಲಿನ ತಾಪವು ಒಂದೆಡೆಯಾದರೆ
ಮಾರಕ ರೋಗಗಳು ಜನರಲ್ಲಿ
ರಕ್ಷಣೆ ಮಾಡುವ ಓಝೋನ್ ಹೋದರೆ
      ಆಪತ್ತು ನಮ್ಮಯ ಬಾಳಲ್ಲಿ//

ಕಾಡನು ಬೆಳೆಸುತ ಹಸಿರನು ಉಳಿಸಲು
ಜನತೆಯ ಬದುಕು ಬಂಗಾರ
ಪರದೆಯ ರಕ್ಷಿಸಿ ಚಂದದಿ ಬದುಕಲು
ಮಾಲಿನ್ಯ ತಡೆಯೇ ಆಧಾರ//

ಉಳಿಸೋಣ ಬನ್ನಿ  ಓಝೋನ್ ಪದರವ
ವಾಯುವ ಶುದ್ಧಗೊಳಿಸುತಲಿ
ಹರಿದೇ ಹೋದರೆ ಪರದೆಯು ನಮಗೆ
ನಾಶವು ಬದುಕೆಂದು ಅರಿಯುತಲಿ//

(16/09/25: ಓಝೋನ್ ದಿನದ ಅಂಗವಾಗಿ)

ಶುಭಲಕ್ಷ್ಮಿ ಆರ್ ನಾಯಕ್

3 Comments on “ಭೂಮಿಗೊಂದು ಛತ್ರಿ..ಓಝೋನ್

  1. ಎಚ್ಚರಿಕೆ ಯ ಸಂದೇಶ ಹೊತ್ತ ಕವನ ಚೆನ್ನಾಗಿ ದೆ..

  2. ಓಝೋನ್ ಪದರಕ್ಕಾಗುತ್ತಿರುವ ಹಾನಿಯಿಂದ ಭೂಮಿ ಎದುರಿಸಬೇಕಾಗಿರುವ ದುರಂತದ ಬಗ್ಗೆ ಕಠೋರ ಸತ್ಯವನ್ನು ಬಿಚ್ಚಿಟ್ಟ ಕವನ!

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *