ಬೆಳಕು-ಬಳ್ಳಿ

ಮಂಥನ

Share Button

ಸೋಲು ಗೆಲುವಿಗೂ ಮೀರಿದ್ದು ಜೀವನ
ಇರಬೇಕು ಚೌಕಟ್ಟಿನೊಳಗೆ ಅಭಿಮಾನ
ಬಿಟ್ಟುಕೊಡಬಾರದು ನಮ್ಮ ಸ್ವಾಭಿಮಾನ
ನಗುನಗುತ ಮುಂದೆ ಸಾಗುವುದೇ ಜೀವನ

ಸೋಲು ಗೆಲುವಿರದ ಆಟ ಇಲ್ಲವೇ ಇಲ್ಲ
ಗೆಲುವನ್ನು ಸಂಭ್ರಮಿಸುವುದು ತಪ್ಪಲ್ಲ
ಸೋಲನ್ನು ಅವಮಾನ ಎಂದುಕೊಳ್ಳಬೇಕಿಲ್ಲ
ಹೆಜ್ಜೆ ಹೆಜ್ಜೆಗೂ ಕಲಿಯಬೇಕು ಜೀವನದ ತುಂಬೆಲ್ಲ

ಎದೆಗುಂದಬಾರದು ಬರುವ ಸೋಲುಗಳಿಗಿಲ್ಲಿ
ಏರಿಳಿತ ಇರುವುದು ಸಹಜ ಸಾಗುವ ದಾರಿಯಲ್ಲಿ
ಕಠಿಣ ಪರಿಶ್ರಮ ಪಡಬೇಕು ನಾವು ಬಾಳಿನಲ್ಲಿ
ಇಂದಲ್ಲ ನಾಳೆ ಬದುಕಿನಲ್ಲಿ ಗೆಲ್ಲಬೇಕು ನಾವಿಲ್ಲಿ

ದುಡುಕಿ ನಿರ್ಧಾರವ ತೆಗೆದುಕೊಳ್ಳಬಾರದು ಇಲ್ಲಿ
ಮನದ ತುಂಬ ಮಂಥನವ ಮಾಡುತ್ತಿರಬೇಕಿಲ್ಲಿ
ಸಮಯ ಸಂದರ್ಭಕ್ಕೆ ಹೊಂದಿಕೊಳ್ಳಬೇಕಿಲ್ಲಿ
ಭಾವುಕರಾಗಿ ಮೂರ್ಖರಾಗಬಾರದು ನಾವಿಲ್ಲಿ

ಯಾರನ್ನೋ ಮೆಚ್ಚಿಸುವ ಹುಚ್ಚು ಬೇಕಿಲ್ಲ
ಬದುಕುವ ದಾರಿಯ ಹುಡುಕಿಕೊಳ್ಳಬೇಕಿಲ್ಲಿ
ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು ನಾವಿಲ್ಲಿ
ನಿತ್ಯವೂ ಸಣ್ಣ ಸಣ್ಣ ಪ್ರಯತ್ನವಿರಲಿ ಜಾರಿಯಲ್ಲಿ

ಅನುಭವಿಸಿ ಬಿಡಿ ಸಿಕ್ಕ ಗೆಲುವಿನ ಖುಷಿಯನ್ನು
ಮರೆತು ಮುಂದೆ ಸಾಗಿ ಸೋಲಿನ ಕಹಿಯನ್ನು
ತಲೆಮೇಲೆ ಹೊತ್ತು ಮೆರೆಸಬಾರದು ಯಾವುದನ್ನು
ಸಮನಾಗಿ ಸ್ವೀಕರಿಸಬೇಕು ಕಷ್ಟ ಸುಖವನ್ನು

ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರ ಕನ್ನಡ.

5 Comments on “ಮಂಥನ

  1. ಬದುಕಿನ ಪಾಠವನ್ನು ಕವನದ ಮೂಲಕ ಮೂಡಿಸಿರುವ ಪರಿ ಚೆನ್ನಾಗಿದೆ ಸಾರ್

  2. ಬಹಳ ಸುಂದರವಾಗಿದೆ ಕವನ. ನಾವು ಹೀಗೆ ಬಾಳಬೇಕು ಅನ್ನುವುದನ್ನು ಹೇಳುತ್ತದೆ ಪ್ರತಿಯೊಂದು ಸಾಲು.

  3. ಉತ್ತಮ ಸಂದೇಶವನ್ನು ಹೊತ್ತ ಚಂದದ ಕವನ.

  4. ಸೋಲು ಗೆಲುವಿಗೂ ಮೀರಿದ್ದು ಜೀವನ ಎಂಬ ತತ್ವವನ್ನು ಚಿತ್ರಿಸಿದೆ ಈ ಸುಂದರವಾದ ಕವನ
    ಅಭಿನಂದನೆಗಳು ಸರ್

  5. ಜೀವನ ಪಾಠವನ್ನು ಬಹು ಅರ್ಥವತ್ತಾಗಿ, ಸಂಕ್ಷಿಪ್ತವಾಗಿ ವಿವರಿಸುವ ಸೊಗಸಾದ ಕವನ

Leave a Reply to ಪದ್ಮಾ ಆನಂದ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *