ಬೆಳಕು-ಬಳ್ಳಿ

ಕಾವ್ಯ ಭಾಗವತ 19 : ಧ್ರುವ – ೦1

Share Button

19 .ಧ್ರುವ – 02
ಚತುರ್ಥ ಸ್ಕಂದ – ಅಧ್ಯಾಯ – 02

ಸ್ವಾಯಂಭೂವ ಮನುವಿನ
ಸಂತತಿಯಲಿ
ಅಧರ್ಮ ಲೋಭ ಕ್ರೋಧ
ಹಿಂಸೆ ಭೀತಿ ಯಾತನೆ
ಸಂತಾನ ವೃದ್ಧಿಯಾಗಿ
ಮೋಕ್ಷಾಭಿಲಾಷಿ ಜೀವಿಗಳಿಗೆ
ಕಂಟಕವಾಗಿ ನರಳಿದವರಿಗೆ
ಸರಿದಾರಿ ತೋರಲು
ಜನಿಸಿದವನೇ ಧ್ರುವ

ಅದೇ ಸ್ವಾಯಂಭಾವ ಮನುವಿನ
ಕುಲದ ಉದ್ಧಾರಕ

ತಂದೆ ಉತ್ತಾನಪಾದ
ತಾಯಿ ಸುನೀತಿ
ಮಲತಾಯಿ ಸುರುಚಿ
ದಿವ್ಯ ಆಮ್ರಫಲದ ರುಚಿಯಾದ
ತಿರುಳುಂಡು ಸುರುಚಿ
ಹಡೆದ ಮಗು ಉತ್ತಮ

ದೃಢ ವೋಟೆ ಭಕ್ಷಿಸಿ
ಸುನೀತಿಯ ಉದರದಲಿ
ಉದ್ಭವಿಸಿದವ ಧ್ರುವ

ರಾಜನ ಮೋಹದ ಮಡದಿ ಸುರುಚಿಯ
ಮೋಹಪಾಶದಲಿ
ಅಂಧನಾದ ರಾಜ
ಪುಟ್ಟಬಾಲಕ ಧ್ರುವ
ತನ್ನ ಮಡಿಲೇರಲು ಬಿಡದೆ
ಕಡೆಗಣಿಸಿದಾಗ

ಮಲತಾಯಿ ಸುರುಚಿ
ಕಟುನುಡಿಗಳನ್ನಾಡಿ
ಐದು ವರುಷದ ಪೋರ
ತನ್ನ ಮಲತಾಯಿಯ
ಕ್ರೂರ ನುಡಿಗಳಿಂದ
ಅಪಾರ ಶೋಕ ಅವಮಾನದಿ
ಜರ್ಜರಿತನಾದ ಬಾಲಂಗೆ
ಸಂತೈಸಿ,

ಈ ಜಗದ ಸಕಲ ಜೀವಿಗಳಿಗೂ
ಬ್ರಹ್ಮಾದಿ ರುದ್ರ ಸಕಲ ದೇವತೆಗಳಿಗೂ
ಶ್ರೀಮನ್ ನಾರಾಯಣನೇ ಪರಮ ದೈವ
ಅವನೊಲುಮೆ ಗಳಿಸಲು
ದೃಢ ಭಕ್ತಿ ವೈರಾಗ್ಯದಲಿ
ಏಕಾಗ್ರಚಿತ್ತದಿಂ ನೀ
ತಪವಂಗೈದು
ಹರಿಕೈಪೆಗೆ ಪಾತ್ರನಾಗಿ
ನಿನ್ನಿಷ್ಟಾರ್ಥಗಳನ್ನು ಪಡೆ
ಎಂದ ಮಾತೆಯೆ ಕಾಲಿಗೆರಗಿ
ಧ್ರುವ ವನದೆಡೆಗೆ ನಡೆದ

ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ http://surahonne.com/?p=41374

(ಮುಂದುವರಿಯುವುದು)
-ಎಂ. ಆರ್.‌ ಆನಂದ, ಮೈಸೂರು

4 Comments on “ಕಾವ್ಯ ಭಾಗವತ 19 : ಧ್ರುವ – ೦1

  1. ಅನಾಥೋ ದೈವರಕ್ಷಕ ಎಂಬಂತೆ, ತಂದೆ ತಾಯಿಯರಿದ್ದೂ, ರಾಜಕುಮಾರನಾದರೂ ನಿಕೃಷ್ಟಕ್ಕೆ ಒಳಗಾದ ದೃವನಿಗೆ ಶ್ರೀಮನ್ನಾರಾಯಾಣನೇ ರಕ್ಷಕನಾದ, ಪುರಾಣದ ಮನಮುಟ್ಟುವ ಭಾಗ ಕಾವ್ಯರೂಪದಲ್ಲಿ ಸರಳವಾಗಿ, ಸಹಜವಾದ ಸುಮಧುರ ರೂಪದಿಂದ ಇಲ್ಲಿ ಮೂಡಿ ಬಂದಿದೆ. ಅಭಿನಂದನೆಗಳು.

  2. ಪದ್ಯ ರೂಪದ ಧ್ರುವ ಚರಿತೆ ಸೊಗಸಾಗಿ ಮೂಡಿಬಂದಿದೆ.

Leave a Reply to ಪದ್ಮಾ ಆನಂದ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *