ಬೆಳಕು-ಬಳ್ಳಿ

ಗಜಲ್

Share Button

ಹಣಕ್ಕಾಗಿ ಹೆಣಗಾಡಿ
ಹೆಣವಾಗುವೇಕೆ ಮನುಜ
ಹೆಣ್ಣಿಗಾಗಿ ತಿಣುಕಾಡಿ
ಕಣ್ಣ್ಮುಚ್ಚುವೇಕೆ ಮನುಜ.

ಮಣ್ಣಿಗಾಗಿ ಕಾದಾಡಿ
ಮಣ್ಣಾಗುವೇಕೆ ಮನುಜ
ಋಣವಿಲ್ಲದಕ್ಕೆ ಕಿತ್ತಾಡಿ
ಪ್ರಾಣಬಿಡುವೇಕೆ ಮನುಜ.

ಮೂರು ದಿನದ ಬಾಳಲ್ಲಿ ಹಾರಾಡಿ
ಬಾಳಲ್ಲಿ ಕಾಲಕಸವಾಗುವೇಕೆ ಮನುಜ
ನೂರಾರು ಸುಳ್ಳು ಭರವಸೆ ನೀಡಿ
ವಿಶ್ವಾಸ ದ್ರೋಹಿಯಾಗುವೇಕೆ ಮನುಜ.

ನಾನು ನನ್ನೆಂದು ಮೆರೆದಾಡಿ
ಏನಿಲ್ಲದಂತಾಗುವೇಕೆ ಮನುಜ
ನಶ್ವರದ ಬಾಳಿಗೆ ಪೇಚಾಡಿ
ಈಶ್ವರನ ಮರೆಯವೇಕೆ ಮನುಜ.

ತಿಳಿದು ಕೂಡ ತಪ್ಪು ಮಾಡಿ
ತಿಳಿಗೇಡಿಯಾಗುವೇಕೆ ಮನುಜ
ಶಿವನಾಡಿದ ಅನುಭವ ನುಡಿ
ಕಡೆಗಣಿಸಿ ಬಾಳುವೇಕೆ ಮನುಜ.

-ಶಿವಮೂರ್ತಿ.ಹೆಚ್, ದಾವಣಗೆರೆ.

4 Comments on “ಗಜಲ್

  1. ಬದುಕಿನ ನಶ್ವರತೆಯನ್ನು ಬಿಂಬಿಸುತ್ತಾ ನೀತಿ ಪಥದತ್ತ ದಾರಿ ತೋರುವ ಸುಂದರ ಕವನ

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *