ಇರಲಿ ಹೋರಾಟ

Share Button

ಪಾಲಿಗೆ ಬಂದದ್ದು
ಪಂಚಾಮೃತ ದಿಟ
ಪಂಚಾಮೃತವನ್ನೇ
ಪಡೆಯಲು ಶ್ರಮಿಸಿ
ಅನವರತ

ಸೋಲು ಗೆಲುವು
ಅನಿಶ್ಚಿತ
ಹೋರಾಡದೇ
ಸೋಲುವುದು
ಅಪಮಾನ, ಅನುಚಿತ

ಹತ್ತಲಾಗದಿದ್ದಿರಬಹುದು
ಅಂದೊಮ್ಮೆ ಅಟ್ಟ
ಇಂದಿನ ಪ್ರಯತ್ನದಲ್ಲಿ
ಹತ್ತಲೂ ಬಹುದು ಬೆಟ್ಟ

ಒಂದಂತೂ ಸ್ಪಷ್ಟ
ಬಯಸಿದ ಮಾತ್ರಕ್ಕೆ
ಬಂದೊದಗದು ರಾಜ ಪಟ್ಟ

ಮುಖ್ಯ ಮನಸ್ಸಿಗೆ
ಇರಬೇಕು ಇಷ್ಟ
ಬಯಸಿದ್ದನ್ನು ಪಡೆಯಲು
ಆಗಲಾರದು ಕಷ್ಟ

ನಟೇಶ

4 Responses

  1. ಸರಳ ಸುಂದರ ಕವನ..ಧನ್ಯವಾದಗಳು ಸಾರ್.

  2. ನಯನ ಬಜಕೂಡ್ಲು says:

    Nice one

  3. ಶಂಕರಿ ಶರ್ಮ says:

    ಪ್ರಯತ್ನ ಪಟ್ಟರೆ ಫಲ… ಇಲ್ಲದಿದ್ದಲ್ಲಿ ಬಾಳು ವಿಫಲ! ಸೊಗಸಾದ ಸಂದೇಶ ಸಾರುವ ಕವನ.

  4. Padmini Hegde says:

    ಹೌದು, ಬಯಸಿದ ಮಾತ್ರಕ್ಕೆಬಂದೊದಗದು ರಾಜ ಪಟ್ಟ!

Leave a Reply to Padmini Hegde Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: