ಶ್ರಾವಣವೆಂದಿತು..

Share Button

ಆಷಾಢದ ಮೋಡಗಳು
ಕೈ ಬೀಸಿ ಕರೆದು
ಮೆಲ್ಲನುಸುರಿದವು.
ಗುಟ್ಟನೊಂದ ಕಿವಿಯೊಳಗೆ

ವಿದಾಯದೆಳೆ ಹೊತ್ತು
ತೆರಳುವ ನೋವು ನನಗೇ ಗೊತ್ತು
ಬರುತಿಹ ಶ್ರಾವಣ ನನ್ನ
ಹೋಗು ಹೋಗೆನುತ ಹಂಗಿಸಿತು
ಸಣ್ಣಗೆ ಹನಿಯುದುರಿಸಿದರೆ ಸಾಕೇ?
ಗಾಳಿಯ ಮೊರೆತದಲಿ
ಮಳೆ ಮೋಡಗಳ ಚೆಲ್ಲಾಡುವುದೇಕೆ?

ಈಗ ನೋಡು, ನನ್ನ ಆಗಮನ
ಇಳೆಯ ತೊಳೆದು ಬಣ್ಣದ
ಹೂವುಗಳ ರಂಗೋಲಿಯಿಡುವೆ
ನಕ್ಷತ್ರ ಕಂಗಳ ಬೆಳಕ
ಅಂಗಳದಲಿ ಮಿನುಗಿಸುವೆ.
ಹಸಿರ ರಾಶಿಯಲಿ ಭುವಿಯ
ತೇರನೆಳೆಯುವೆ
ಹೆಂಗೆಳೆಯರೆದೆಯಲಿ
ರಂಗಿನ ರಾಗಗಳ ನುಡಿಸುವೆ

ನೀ ಕೊಟ್ಟ ವಿರಹ ಶಾಪದ
ಜೋಡಿಗಳ ಜೊತೆಗೂಡಿಸುವೆ
ತುಂಬಿ ಹರಿವ
ನದಿತೊರೆಗಳಬ್ಬರದ ಇನಿದನಿ
ಧಗೆಯಲದ್ದಿದ ಧರೆಯ ನಸುನಗೆಯ
ಹಸಿಯೊಡಲ ರಾಗ
ಆಗಸಕೆ ಮೊಗ ಮಾಡಿದ ಪರಾಗ

ಎಲ್ಲ ಎಲ್ಲವೂ ನನಗಾಗಿ ಕಾಯ್ವ
ಅಭಿಸಾರಿಕೆಯಾಗಿದ್ದವು
ಕೆಸರನೆರಚಿ, ತಣಿಸಿ
ನೀರಾಟವಾಡುತ್ತಾ,
ಮುದದ ಮುದ್ದಾದ
ತಲ್ಲಣಗಳಿಗೆ
ಜೊತೆಯಾಗುತ್ತಾ
ನಲಿದುಲಿದು
ಒಲಿದು ಬರುವ ….
ನಾನೇ ಶ್ರಾವಣ

-ಬಿ. ಕೆ. ಮೀನಾಕ್ಷಿ, ಮೈಸೂರು 

8 Responses

  1. ಶ್ರಾವಣವೆಂದಿತು…ಕವನ ಸೊಗಸಾಗಿ ಮೂಡಿಬಂದಿದೆ.

    ಧನ್ಯವಾದಗಳು ಮೀನಾ

  2. ನಯನ ಬಜಕೂಡ್ಲು says:

    ಸುಂದರ ಕವನ

  3. . ಶಂಕರಿ ಶರ್ಮ says:

    ಶ್ರಾವಣದ ಮನದ ನುಡಿಗಳು ಭಾವಪೂರ್ಣವಾಗಿ ಮೂಡಿ ಬಂದಿವೆ… ಈ ಸುಂದರ ಕವನದಲ್ಲಿ.

  4. Anonymous says:

    ಕವನ ಚೆನ್ನಾಗಿ ಮೂಡಿಬಂದಿದೆ ತಂಗಿ.

  5. Anonymous says:

    ಚೆನ್ನಾಗಿ ಮೂಡಿಬಂದಿದೆ.

  6. Anonymous says:

    ಚೆನ್ನಾಗಿದೆ.

  7. Vijayasubrahmanya says:

    ಚೆನ್ನಾಗಿದೆ.

  8. B.k.Meenakshi says:

    ಕವನವನ್ನೋದಿ ಪ್ರತಿಕ್ರಿಯೆ ನೀಡಿದ ನಾಗರತ್ನ ಮೇಡಂ, ನಯನಾ ಮೇಡಂ, ಶಂಕರಿಶರ್ಮ ಮೇಡಂ, ವಿಜಯ ಸುಬ್ರಹ್ಮಣ್ಯ ಮತ್ತು ಮೂವರು ಅನಾಮಧೇಯರಿಗೆ….ಎಲ್ಲರಿಗೂ ಆಭಾರಿಯಾಗಿರುವೆ. ನಿಮ್ಮಲ್ಲರ ಮೆಚ್ಚುಗೆ ನನ್ನ ಬರವಣಿಗೆಯ ಸ್ಪೂರ್ತಿ. ಧನ್ಯವಾದ

Leave a Reply to ನಾಗರತ್ನ ಬಿ. ಆರ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: