ಬೀಗದಿರು-ಬಾಗದಿರು

Share Button

ಗೆದ್ದಾಗ ಎದೆಯುಬ್ಬಿಸಿ ಬೀಗದಿರು
ಸೋತಾಗ ತಲೆ ತಗ್ಗಿಸಿ
ಬಾಗದಿರು
ಗೆಲುವು ಸೋಲುಗಳು
ಜೀವನದ ಅವಿಭಾಜ್ಯ ಅಂಗ

ಗತಕಾಲದ ಕೆಟ್ಟದನು
‌ಮತ್ತೆಂದು ನೆನೆಯದಿರು
ಸತ್ಯದ ದಾರಿಯಲ್ಲಿ
ಎಂದೆಂದು ನಡೆಯುತಿರು
ತೊರೆಯದಿರು ಎಂದೆಂದು
ಸಜ್ಜನರ ಸಂಘ

ಮಿತ್ರ ದ್ರೋಹವನು
ಎಸಗದಿರು
ದ್ವೇಷಾಸೂಯೆಗಳ
ಬೆಳಸದಿರು
ಶುದ್ಧ ಮಾಡುತಲಿರು
ನೀ ನಿನ್ನಂತರಂಗ

ಕಷ್ಟಗಳನೆದುರಿಸುತಿರು
ಇಷ್ಟಗಳನರಸುತಿರು
ಉಪಕಾರಗಳನೆಂದು
ಮರೆಯದೆ ನೆನೆಯುತಿರು
ಗೊತ್ತಿದ್ದೂ ಸೇರದಿರು
ದುರ್ಜನರ ಸಂಘ

ಏನಾಗುವುದೋ
ಏನಾಗದಿರುವುದೋ
ಮಾನವೀಯತೆಯ
ಮರೆಯದಿರು
ಇರೋವರೆಗೂ
ಕೊನೆಯುಸಿರು
ಅದತಾನೆ ಬಯಸುತಿದೆ
ಸರ್ವ ಜನಾಂಗ

-ನಟೇಶ

7 Responses

  1. ಶಿವಮೂರ್ತಿ.ಹೆಚ್. says:

    ಚೆನ್ನಾಗಿದೆ

  2. SHARANABASAVEHA K M says:

    ತುಂಬಾ ಚೆನ್ನಾಗಿದೆ

  3. ಕೆ. ರಮೇಶ್ says:

    ಚೆನ್ನಾಗಿ ಮೂಡಿ ಬಂದಿದೆ.

  4. ನಾಗರತ್ನ ಬಿ. ಅರ್. says:

    ಸರಳ ಸುಂದರ ಕವನ ಚೆನ್ನಾಗಿದೆ ಸಾರ್.

  5. ನಯನ ಬಜಕೂಡ್ಲು says:

    ಚಂದದ ಸಾಲುಗಳು

  6. . ಶಂಕರಿ ಶರ್ಮ says:

    ಜೀವನದಲ್ಲಿಯ ಸರಿತಪ್ಪುಗಳನ್ನು ಎತ್ತಿ ತೋರಿಸಿ, ಸರಿ ದಾರಿಯಲ್ಲಿ ನಡೆಯುವ ಪರಿಯನ್ನು ಭಾವಪೂರ್ಣವಾಗಿ ಬಿಂಬಿಸಿದ ಕವನ ಸೊಗಸಾಗಿದೆ.

  7. Padma Anand says:

    ಆಗಾಗ ಜೀವನದಲ್ಲಿ ನೆನಪಿಸಿಕೊಂಡು ಅಳವಡಿಸಿಕೊಳ್ಳ ಬೇಕಾದ ತತ್ವಗಳನ್ನೊಳಗೊಂಡ ಸುಂದರ ಕವಿತೆ.

Leave a Reply to . ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: