ಅನ್ನದಾತ

Share Button


ಅನ್ನ  ನೀಡುವ ಕೈ  ಅದು ಎಂದೂ ಸೋಲದು  l
ಅನ್ನ ಬೇಡುವ  ಕೈ  ಅದು ಎಂದೂ  ಹರಸುವುದು  ll

ಹೇ  ತಾಯಿ ಅನ್ನಪೂರ್ಣೇಶ್ವರಿಯೇ
ನಿನ್ನ ಅನುಗ್ರಹವಿಲ್ಲದೆ  ಅದ್ಯಾವ
ಜೀವಿ ತಾನೆ  ಬದುಕುಳಿಯಬಲ್ಲದು ?

ಪ್ರತಿ ಅಗಳಿನಲ್ಲು  ತಿನ್ನೋರ ಹೆಸರು  ಬರೆದಿರಬಹುದು
ಅನ್ನವೆ  ದೈವ  ಅದುವೆ  ಪರಬ್ರಹ್ಮ !
ಅನ್ನವಿಕ್ಕುವಾತನೇ ಪ್ರತ್ಯಕ್ಷ  ದೈವ  ನಮಗೆಲ್ಲಾ  !

ಪಂಚಭೂತವನೆ  ದೈವವೆಂದು  ಭಾವಿಸಿ
ಪರಿ ಪರಿಯಾಗಿ ಆರಾಧಿಸುವ  ಅನ್ನದಾತನು
ಪ್ರಾಣಿಪ್ರಿಯನು  ಹೌದು ! ಪ್ರಕೃತಿ ಪ್ರಿಯನು ಹೌದು !

ಜೀವ ಜಗತ್ತಿಗೆ ಅನ್ನವಿಕ್ಕುವಾತನೆ
ಭೂಮಾತೆಯ ನಿಷ್ಠಾವಂತ  ಸೇವಕ
ಜನಾನುರಾಗಿ ಈ ಅನ್ನದಾತನೊಬ್ಬನೆ

ಬಿತ್ತಿದ  ಒಂದೊಂದು ಬಿತ್ತವು  ಸಸಿಯಾಗಿ
ಬಿಟ್ಟ ಫಲವದು ರಾಶಿ ರಾಶಿ  ಧಾನ್ಯವಾಗಿ
ಅನ್ನಧಾತನನು  ಹಾರೈಸಿದಳು  ವಸುಧೆ  ತಾಯಿಯಾಗಿ.

ನಾಗರಾಜ್ ಕಾಳೆ (SKIN).

7 Responses

  1. ಚೆನ್ನಾಗಿದೆ ಕವನ. ಧನ್ಯವಾದಗಳು

  2. B C Narayana Murthy says:

    Fine

  3. ನಾಗರತ್ನ ಬಿ. ಅರ್. says:

    ವಾವ್ ಸತ್ಯಸ್ಥಸತ್ಯವಾದ ಮಾತುಗಳು ಕವನರೂಪದಲ್ಲಿ ಪಡಿಮೂಡಿಸಿರುವ ರೀತಿ ಚೆನ್ನಾಗಿದೆ ಸರ್

  4. Anonymous says:

    ಸೂಪರ್ ಕವನ

  5. ನಯನ ಬಜಕೂಡ್ಲು says:

    ಚಂದದ, ವಾಸ್ತವದ ಕವನ

  6. Padma Anand says:

    ಅನ್ನದಾತ ಹಾಗೂ ಭೂಮಿತಾಯಿಯನ್ನು ಅಕ್ಕರೆಯಿಂದ ಸ್ಮರಿಸಿರುವ ರೀತಿ ಸೊಗಸಾಗಿ ಮೂಡಿ ಬಂದಿದೆ ಕವನದಲ್ಲಿ.

  7. ಶಂಕರಿ ಶರ್ಮ says:

    ಜಗದ ಜೀವಿಗಳ ಜೀವದಾತರಾದ ಅನ್ನದಾತ ಮತ್ತು ಭೂಮಾತೆಯರನ್ನು ಸ್ಮರಿಸಿದ ಪರಿ ಬಹಳ ಸೊಗಸಾಗಿದೆ.

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: