ಐಕ್ಯತೆ ಇರಲಿ ವಿಶ್ವದಲ್ಲಿ

Share Button

 

ಒಂದರಿಂದಾಗದು ಏನೊಂದು
ಎರಡು ಕೂಡಿದರೆ ಸಾಧ್ಯವಾಗುವುದು ಪ್ರತಿಯೊಂದು
ಒಟ್ಟಾಗಿರದಿದ್ದರೆ  ಸಾಧಿಸಲಾಗದು ಏನೊಂದು
ಒಟ್ಟಾಗಿದ್ದರೆ ಸಾಧಿಸಬಹುದು ಹೊಸದೊಂದು .

ಒಗ್ಗಟ್ಟು ಬೇಕು ಮನೆಯೊಳಗೆ
ಮನದಾಳದಿಂದ ನೆರೆ – ಹೊರೆಯೊಳಗೆ
ಬೇಧ – ಭಾವ ಬೇಡ ಸಮಾಜದೊಳಗೆ
ಭ್ರಾತೃತ್ವ ಭಾವನೆ ಇರಲಿ ಮನದೊಳಗೆ .

ಎಲ್ಲಾ ಒಂದೇ ಎಂಬ ಮಂತ್ರದಲ್ಲಿ
ಶಾಂತಿ ಸಿಗುವುದು ಸಮಾಜದಲ್ಲಿ
ಐಕ್ಯತೆ ಇದ್ದರೆ ದೇಶದಲ್ಲಿ
ಸಾಧಿಸಬಹುದು ವಿಶ್ವದಲ್ಲಿ .

– ಮೇಘನ ಪ್ರಶಾಂತ್ ಹೊಳ್ಳ , ಬೈಪಾಡಿ

2 Responses

  1. ನಯನ ಬಜಕೂಡ್ಲು says:

    ಇವತ್ತಿನ ಅಗತ್ಯ ಇದು. ಉತ್ತಮ ಸಂದೇಶವನ್ನೊಳಗೊಂಡ ಕವನ.

  2. ಶಂಕರಿ ಶರ್ಮ, ಪುತ್ತೂರು says:

    ಒಗ್ಗಟ್ಟು, ಐಕ್ಯತೆಗಳ ಅಗತ್ಯತೆಗಳನ್ನು ಮನದಟ್ಟು ಮಾಡುವ ಚಂದದ ಕವನ.

Leave a Reply to ಶಂಕರಿ ಶರ್ಮ, ಪುತ್ತೂರು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: