ಅದೃಷ್ಟ

Share Button

ಲಕ್ಷೋಪಲಕ್ಷ ಸುಡು ಸುಡುವ,
ಕೊರೆ ಕೊರೆವ, ಹೊಗೆ-ಧಗೆಯ,
ನರಪಿಳ್ಳೆ, ಅರೆಪಿಳ್ಳೆ,
ಜಂತು ಜೀವಾಣುಗಳಿಲ್ಲದ,
ನೀರು-ನಿಡಿ ಸುಳಿಗಾಳಿಗಳಿಲ್ಲದ ಭಯಂಕರ ಗ್ರಹಗಳ ಬಿಟ್ಟು
ಈ ಭುವಿಯಲ್ಲಿ ಇಳಿದದ್ದು!

ಕೆಂಪೊಡೆವ ಸೂರ್ಯ, ತಂಪಿಡುವ ಚಂದ್ರರು ಮೆರೆದು ಕಾಪಿಡುವ,
ಹಸಿರು ಕಾನನ, ನೀಲ ಬಾನಿನ,
ಹಳದಿ ಕಿತ್ತಳೆ ಕಂದು ನೇರಳೆ
ಬಣ್ಣದೋಕುಳಿಯ ನೆಲೆವೀಡಿನಲ್ಲಿ
ಹೆಜ್ಜೆ ಇಟ್ಟದ್ದು!

ಅಗಾಧ ಬ್ರಹ್ಮಾಂಡದಲ್ಲಿ
ನೀಲಚೆಂಡು ತಿರುಗುವಲ್ಲಿ
ಭರತಭೂಮಿ ಖಂಡದಲ್ಲಿ
ಚೊಕ್ಕ-ಚೆಲುವು ನಾಡಿನಲ್ಲಿ
ಚಿಕ್ಕ ದೇಹವೊಂದರ ಅಂಡಕೆ,
ಸಹಸ್ರ, ಸಹಸ್ರ ಆಕಾಂಕ್ಷಿ ಮೀನುಗಳು ಆತುರದಿ, ಕಾತುರದಿ
ಈಜುತ್ತ ಬಂದಾಗ… ಹೆತ್ತವ್ವ
ಎನ್ನಮಾತ್ರವನಾಯ್ಕೆ ಮಾಡುತ್ತ
ಮೀನೊಂದು ಮನುಷ್ಯನಾಗಲು
ಸಹಕರಿಸಿ ಸಲಹಿದ್ದು!

ಸದ್ಭಾವ ಸದ್ಧರ್ಮ,
ಸಜ್ಜೀವ-ಸಂಗಮ-ಸಮಾಗಮ ಸಂಪೂರ್ಣತೆಯಲ್ಲಿ
ಸಡಗರದಿ
ಸಂಭ್ರಮಸುತ್ತ ಇರುವುದು!
ಭಲೆ ಅದೃಷ್ಟವೋ ಅದೃಷ್ಟ!

ಪಟ್ಟಿ ದೊಡ್ಡದು ಲೇಖ ಚಿಕ್ಕದು
ಮಹಿಮೆ ತಾನದು ದಿವ್ಯ
ದೃಶ್ಯ, ತೆರೆ ತೆರೆಯೆ ರಮ್ಯ
ಅನನ್ಯ, ಅಪೂರ್ವ, ಅಪಾರ!

-ಕೆ.ಆರ್.ಎಸ್. ಮೂರ್ತಿ

12 Responses

  1. ಬೆಂಶ್ರೀ ರವೀಂದ್ರ says:

    ಸುಂದರ ಕಲ್ಪನೆ ; ನೈಜ ವಿಜ್ಞಾನದ ಮೆರಗು. ಅಭಿನಂದನೆಗಳು

  2. Gangadharaiah CP says:

    Very well narrated our anguish … very imaginative.
    Keep the spirit on.

  3. km vasundhara says:

    ಪದಪ್ರಯೋಗ ಅಪೂರ್ವ ಸೊಗಸಿನಿಂದ ಕೂಡಿದೆ. ಭಾಷೆ ಭಾವಗಳ ಸಮ್ಮಿಲನ ಅನನ್ಯವಾಗಿದೆ. ಕಾವ್ಯ ಓದುವಿಕೆಯ ಸೊಗಸು ಹೆಚ್ಚಿಸಿದ ನಿಮಗೆ ಧನ್ಯವಾದಗಳು…

  4. Anonymous says:

    ಬ್ರಹ್ಮಾಂಡ ಸುತ್ತಿ ಭುವಿಗಿಳಿದ ಪರಿ ಸೊಗಸಾಗಿದೆ!

  5. Jagadish says:

    Nice one. Shabdhalankara and Arthalankara both in a proper mix

  6. ಶ್ರೀನಿವಾಸ್ ಬಿ.ಎಸ್ says:

    ಸುಂದರ ಅರ್ಥಪೂರ್ಣ ಕವನ.ಅಭಿನಂದನೆ

  7. Gonwar Kishan Rao says:

    ಸುಂದರ ಕಲ್ಪನೆ.ದಿವ್ಯ ಮಹಿಮೆಯ ಹಾಡಲು ಪಾಡಲು ಶಕ್ತಿಗೆ ಮೀರಿದ್ದು ಎನ್ನಯವ ವಿನಯದಲ್ಲಿ ಕವಿತೆ ಸಾರ್ಥಕತೆಕಂಡಿದೆ.

  8. ನಯನ ಬಜಕೂಡ್ಲು says:

    ಸೂಪರ್ ಸರ್

  9. Hema, hemamalab@gmail.com says:

    ಅರ್ಥಪೂರ್ಣ ಕವನ..

  10. ಬಿ.ಆರ್.ನಾಗರತ್ನ says:

    ಚಂದದ ಕವನ ಸಾರ್

  11. ಶಂಕರಿ ಶರ್ಮ says:

    ಸೊಗಸಾದ ಕವನ.

  12. ಕೆ.ಆರ್.ಎಸ್.ಮೂರ್ತಿ says:

    ಸ್ಪಂದಿಸಿದ ಎಲ್ಲ ಓದುಗರಿಗೆ ಧನ್ಯವಾದಗಳು.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: