ಕರೋನ ಕವನ  

Share Button

ನಿನಗೆ ಬಡತನ
ಸಿರಿತನದ ಭಾವವಿಲ್ಲ
ಧರ್ಮ ಧರ್ಮದ
ನಡುವಿನ ಅಂತರವಿಲ್ಲ

ಕಂದಮ್ಮ ಎನ್ನುವ ದಯ
ದಾಕ್ಷಿಣ್ಯವಿಲ್ಲಾ
ಯಾವ್ವನ ಪ್ರೌಢ ಎಂಬ
ಗಡಿ ಇಲ್ಲಾ.

ಜಾತಿ ಜಾತಿಯ
ಜಂಜಾಟವಿಲ್ಲ
ಮೇಲು ಕೀಳೆಂಬ
ಕೆಲಸದ ಅಂತಸ್ತು ಇಲ್ಲಾ

ನೀ ದೇಶ ದೇಶದ
ಗಡಿಯ ದಾಟಿರುವೆ
ವಿಶ್ವವನೆ ನಡುಗಿಸಿರುವೆ
ಕ್ರೂರ ಮನುಜ ಕುಲವನೆ
ತಲ್ಲಣಿಸಿರುವೆ

ಮನುಕುಲಕೆ
ಶುಚಿಯ ಪಾಠ ಮಾಡಿರುವೆ
ಚೀನಾದ ವನ್ಯಪ್ರಾಣಿ
ಜಗತಿಗೆ ಹೊಸ ಹರುಷ ತಂದಿರುವೆ

ಕರೋನ (Carona ) ಎಂಬ ಹೆಸರಲಿ
ಜನರ ನಿದ್ದೆಗೆಡಿಸಿರುವೆ
ಸಾವಿನ ರುದ್ರ ನರ್ತನ
ಗೈಯುತ್ತ ಸಾಗಿರುವೆ.

– ರಾಘವ್ ರಾವ್

3 Responses

  1. ನಯನ ಬಜಕೂಡ್ಲು says:

    ಹೌದು, ಮಾನವನ ನಿರ್ಲಕ್ಷ್ಯ, ಅಶುಚಿತ್ವ ತೋರಿಸುವ ಬುದ್ದಿಗೆ, ಸರಿಯಾದ ಚಾಟಿ ಏಟಿನ ಪಾಠ ಹೇಳಿದೆ ಕರೋನ.

  2. Shankari Sharma says:

    ಜಗತ್ತನ್ನೇ ನಡುಗಿಸುತ್ತಿರುವ ಈ ಮಹಾಮಾರಿ, ಕ್ರೂರಿ ಮಾನವನಿಗೆ ಸರಿಯಾದ ಪಾಠವನ್ನೇ ಕಲಿಸುತ್ತಿದೆ…ಸಕಾಲಿಕ ಕವನ.

  3. Anonymous says:

    SUPER

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: