ಬಿಡು ಮುನಿಸು ಕೊಡು ಮನಸು

Share Button

ರಕ್ತವನಿಡಿದಿಟ್ಟು ಒಮ್ಮೆಲೆ ದೇಹಕೆ
ಹಂಚುವ ಹೃದಯದ ಕಪಾಟುಗಳಂತೆ
ಅನುರಾಗವದು  ಮೊಗ್ಗಾಗಿ ಅರಳಿ
ಕಂಪಸೂಸುವ ಸುಮದಂತೆ.. ಗೆಳತಿ

ನದಿಯು ಕೊರಗುವುದೇನು
ರವಿಯು ಮೇಲ್ಮೈ ಸೋಕಿ
ನೀರ ಕದಿಯುವನೆಂದು
ಮುಂಗಾರು ಶುರುವಾಗೆ
ಮೈದುಂಬಿ ಹರಿದು ಮನತಣಿಸಳೇನು..?

ನೋಡು ಬಾ ಗೆಳತಿ ವೃಕ್ಷವದು
ಒಣಗಿ ನಿಂತಿದೆ ಇಲ್ಲಿ
ಚೈತ್ರಮಾಸಕೆ ಕಾದು ಚಿಗುರಿ
ಹಸಿರ ಪಸರಿಸದೇನು?

ಮಾಮರದ ನಂಟು ಕೋಗಿಲಿಗೆ
ಹೇಳಿಕೊಟ್ಟವರಾರು
ಸಂಬಂಧಗಳ ಬಿಗಿಗೊಳಿಸಿ
ಹಾಡುತಿರಲು ಅನುರಾಗವದು
ಫಲಕೊಡದೇನು..?

ಕಾಯಿ ಹಣ್ಣಾಗಿ ಉದುರಿದರೂ
ಜೀವಕಳೆಯದು ಬತ್ತದು ತಿಳಿ ಗೆಳತಿ
ಕಾಯಿ ಉದುರಿದರೂ ಅನುಗಾಲ
ಗೊನೆಬಿಟ್ಟು ಕಲ್ಪವೃಕ್ಷವದು
ನಗುತಿಲ್ಲವೇನು..?

ಸಂಚಾರಿ ನಿಯಮಗಳ
ನಿಷ್ಠೆಯೊಳು ಪಾಲಿಸಿರೆ
ಅಪಘಾತದ ಅಂಜಿಕೆಯೇಕೆ
ಅನುರಾಗವದು ಅಮೃತವು ಸವಿಯುವ
ಬಿಡು ಮುನಿಸು ಕೊಡುಮನಸು ಗೆಳತಿ..

– ಗೋವಿಂದ್ ರಾಜು ಬಿ.ವಿ.ಗೌಡ,  ಬೆಂಗಳೂರು

2 Responses

  1. ನಯನ ಬಜಕೂಡ್ಲು says:

    ಪ್ರಕೃತಿಯ ಒಳಗೆ ಅವಿತಿರುವ ಬದುಕಿನ ಪಾಠವನ್ನು ಪರಿಚಯಿಸಿದ ಪರಿ

  2. Shankari Sharma says:

    ನಿಸರ್ಗದಲ್ಲಿನ ಜೀವನ ಪಾಠ, ಕವನ ರೂಪದಲ್ಲಿ ಚೆನ್ನಾಗಿ ಮೂಡಿಬಂದಿದೆ.

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: