ಹೇಗೆ ವಂದಿಸಲಿ ಕನ್ನಡ ನಾಡಿಗೆ

Share Button

ಹೇಗೆ ವಂದಿಸಲಿ ಕನ್ನಡ ನಾಡಿಗೆ
ಕಾಶ್ಮೀರದ ಸೊಬಗನು ಮೂಡಿಸಿದೆ ಕೊಡಗಿನ ಗಿರಿಯಲಿ
ಗಂಗಾ ಯಮುನೆಯ ಪಾವಿತ್ರವನ್ನು ಕರುಣಿಸಿದೆ ಕಾವೇರಿಯಲಿ
ಸಕ್ಕರೆಯ ಸ್ವಾದ ಮೆಳಿಸಿದೆ ಮಂಡ್ಯದ ಕಬ್ಬಿನ ತೆನೆಯಲಿ

ಶಿಲ್ಪಕಲೆಯ ಸುನಾಮಿಯನ್ನೇ ಸೃಷ್ಟಿಸಿದೇ ಬಾದಾಮಿ
ಐಹೊಳೆ ಹoಪೆ ಹಳೇಬೀಡು ಬೇಲೂರಿನ ನೆಲದಲಿ
ಕಲೆಯ ಸಾಮ್ರಾಜ್ಯವನೇ ಕರುಣಿಸಿದೆ
ಗಂಗಾ ಕದಂಬ ಹೊಯ್ಸಳ ಚಾಲುಕ್ಯರ ವಂಶದಲಿ

ಸಿರಿಗಂಧದ ಕಾನನವೇ ಸೃಷ್ಟಿಸಿದೇ ಸಹ್ಯಾದ್ರಿಯಲಿ
ಸೂರ್ಯ ರಶ್ಮಿಯ ಚಿತ್ತಾರ ಚಿತ್ರಿಸಿದೆ ಕಡಲ ಕಿನಾರೆಯಲಿ
ಸಾಹಿತ್ಯದ  ಭಂಡಾರವ ಮೂಡಿಸಿದೆ
ಪಂಪ ರನ್ನ ಶಿಶುನಾಳ ಕನಕ ಪುರಂದರ ಕೃತಿಗಳಲಿ

ಸೌಂದರ್ಯಾದ ನಕ್ಷತ್ರವನೆ ಚಿತ್ರಿಸಿದೇ
ಕನ್ನಡ ನಾಡಿನ ವನಿತೆಯರಲಿ
ವೀರತ್ವದ ವಜ್ರಕಠೋರತೆಯ ದೇಹವನೆ
ನೀಡಿದೆ ಕಾರ್ಯಪ್ಪ ,ತಿಮ್ಮಯ್ಯ ಹೃದಯದಲಿ

ಧರ್ಮ ಧರ್ಮದ ಕಂದಕವ ತೊಡೆದು
ಶಾಂತಿಯ ಮಂತ್ರವ ಮೂಡಿಸಿದೆ ಕನ್ನಡದ ಮನಗಳಲಿ
ಹೇಗೆ ವಂದಿಸಲಿ ಕನ್ನಡತಾಯೆ
ನೀ ಸೃಷ್ಟಿಸಿದ ಕನ್ನಡ ನಾಡಿಗೆ…

– ರಾಘವ್ ರಾವ್ , ಚೆನ್ನೈ.

3 Responses

  1. ನಯನ ಬಜಕೂಡ್ಲು says:

    ಕನ್ನಡ ನಾಡಿನ ಹಿರಿಮೆಯನ್ನು ಸಾರುವಂತಹ ಸಾಲುಗಳು .

  2. Shankari Sharma says:

    ಹೌದು, ಕನ್ನಡಾಂಬೆಯ ಹಿರಿಮೆ ಅಪಾರ. ಸುಂದರ ಕವನ.

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: