ಆಚಾರ್ಯ ದೇವೋ ಭವ!

Share Button


ಅಂಜಿಕೆಗಳಿರದೇ
ಅತ್ತರೂ ಬಿಡದೇ
ಅಮಿತೋತ್ಸಾಹದಿ
ಅನುದಿನ ಖುಷಿಯಲಿ
ಕಲಿಸುವ ಗುರುವಿಗೆ ನಮನ

ಅರಿವೆ ಇಲ್ಲದಾಗ
ಅಕ್ಷರರಥವೇರಿಸಿ
ಅರಿವು ಮೂಡಿಸಿ
ಅನ್ನದ ಹಾದಿಯನು
ತೋರಿದ ಗುರುವೇ ನಮನ

ಆರಕ್ಕೇರಿಸುತಲೇ
ಅಲ್ಲಿಂದಿಳಿಯದಿರು
ಅರಮನೆ ಕನಸಿನಲಿ
ಅಲುಗಾಡದೆ ನಡೆದು
ಗೆಲ್ಲೆಂದ ಗುರುವಿಗೆ ನಮನ

ಅಂಗಳದಲ್ಲೋಡಿಸಿ
ಅಂಕಣಗಳನ್ನಡಿಸಿ
ಅದೆಷ್ಟೆಷ್ಟೋ ಆಡಿಸಿ
ಅಂತಿಮ ಮೆಟ್ಟಲೇರಿಸಿ
ಕುಣಿದ ಗುರುವಿಗೆ ನಮನ

ಅಮ್ಮನ ಅಕ್ಕರೆ ನಡುವೆ
ಅಪ್ಪನ ಗುಮ್ಮನ ನಡೆ
ಅವರಿವರ ಅಚ್ಚರಿಯಲಿ
ಅಭ್ಯಾಸದಿ ಜಯವಿದೆ
ಎಂದ ಗುರುವಿಗೆ ನಮನ

ಅಶಿಸ್ತನು ತೊಡೆಯುತ
ಅಧ್ಯಯನ ಮಾಡೆನ್ನುತ
ಆಡಂಬರವಿಲ್ಲದೆನ್ನನು
ಅಣ್ಣನಂತಿದ್ದು ತೀಡುತ
ಕಲಿಸಿದ ಗುರುವಿಗೆ ನಮನ

ಅಂದಿನಂತಿಲ್ಲದಿದ್ದರೂ
ಅದೇ ಭಾವನೆಗಳಲಿ
ಆನುರಾಗ ತುಂಬುತ
ಆಚಾರ್ಯನ ಆಸ್ಥಾನದಿ
ಕುಳಿತಿಹ ಗುರುವಿಗೆ ನಮನ

 

 -ಗಣೇಶಪ್ರಸಾದ ಪಾಂಡೇಲು

1 Response

  1. Shruthi Sharma says:

    ತುಂಬಾ ಚೆನ್ನಾಗಿದೆ .. 🙂

Leave a Reply to Shruthi Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: