ಹನಿಗಳಲ್ಲಿ ಗಾಂಧಿ…

Share Button

 

 anatha-ramesh

 

ಮುತ್ಸದ್ದಿ ಗಾಂಧಿಗೆ

ಅವನ  ಕನ್ನಡಕವೆ

ದುರ್ಬೀನಾಗಿತ್ತು

ಅದು ದೇಶದ ಭವಿಷ್ಯ ಕಾಣುವ

ಸಾಧನವೂ ಆಗಿತ್ತು

 

ತನ್ನ ಊರುಗೋಲನ್ನು

ಕೊಳಲ ಧ್ವನಿಯಾಗಿಸಿ

ಮೋಹನನಾಗಿದ್ದ

ಆಸೆಗೊಂಚಲ ಜನರು

ಸುತ್ತಲೂ ನೆರೆದರು

 

ಕೊಳಲ ಧ್ವನಿಯಲ್ಲು

ಕಹಳೆ ಮೊಳಗು

ಕೇಳಿಸಿಕೊಂಡರು

ಮೇಧಾವಿ ಮ್ಲೇಚ್ಛರು !

 

ಉದ್ಧ ಮೂಗು

ಅಗಲ ಕಿವಿಗಳು

ಗ್ರಹಿಕೆಯಲ್ಲಿ ಸ್ಪರ್ಧಿಗಳು

ಆದರೂ ತಮ್ಮ ಗುಟ್ಟು

ಬಿಟ್ಟುಕೊಡದವರು

ಅವನದೇ ನಿಕಟವರ್ತಿಗಳು ! 

 

ದೊಡ್ಡ ಗಡಿಯಾರ

ಕಟ್ಟಿಕೊಂಡು

ದೇಶದ ಸಮಯಕ್ಕೊದಗಿದನಲ್ಲ?

ಸರಿ ಸಮಯಕ್ಕೆ ಕಾದ

ಸಾಧಕರೂ ಇದ್ದರಲ್ಲ!?

 

 charkha and gandhi

ಉದ್ದ ಕೈಗಳಿಂದ

ಅಹಿಂಸೆಯನ್ನು

ಚೆನ್ನಾಗಿ ನಾದಿ

ರುಚಿಗೊದಗಿಸಿದ …

ಚಪ್ಪರಿಸಿದ ಮಂದಿ

ಘರ್ಜಿಸಿದರು ಕೊಬ್ಬಿ! 

 

ರಾಮರಹೀಮರ ಭಜಿಸಿ

ದೇಶ ಕಟ್ಟುವಾಗ

ಹಿಂಸೆಯ ಗೋಡೆ

ಉಚಾಯಿಸಿತ್ತು….

ನೊಂದ ಗಾಂಧಿ

ಉಪವಾಸ ಕೂತರೂ

ಸೇವಿಸಿದರು….

ಅಖಂಡ ನೋವು 

 

ರಾಮ’  ನಾಮಧೇಯ

ಬಂಡೆದ್ದು ಗುಂಡಿಟ್ಟ

ಕೊನೆಯುಸಿರಲ್ಲು

ರಾಮಮಂತ್ರವೆ

ಅವನ ಬಾಯಲ್ಲಿ ದಟ್ಟ 

 

ಅಹಿಂಸೆಯ ಪ್ರತಿಪಾದಕನ

ಹತ್ಯೆ ಮಾಡಿದವನ ಕೊನೆ

ನೇಣು ಬಿಗಿಸಿದ ಮೋಹನ

ದಾಸನಶಿಷ್ಯಗಣಸಾಧನೆ!

 

ಕಟುಸತ್ಯಗಳನ್ನು

ಅವನು ಹುಟ್ಟಿದ ದಿನ

ಮುಚ್ಚಿಡಬೇಕು…

ಮಾಂಸ ಮದಿರೆ ಒಂದಕ್ಕೆರಡು

ಮುನ್ನಾ ದಿನವೆ ಖರ್ಚಾಗಿವೆ

ಚಪ್ಪರಿಸಿದ  ನಾಲಿಗೆಗಳು

ಭಾಷಣಗಳಿಗೆ ಸಜ್ಜಾಗಿವೆ!

 

 

 – ಅನಂತ ರಮೇಶ್

1 Response

  1. kumara says:

    ಸುಂದರ ಕವನ. ಚೆನ್ನಾಗಿದೆ. ಮನ ಮುಟ್ಟುವ ಮತಿ ಚುಚ್ಚುವ ಮಾತಿಗೆ ಮನ ತೆರೆವರೆ ?

Leave a Reply to kumara Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: