ಬೆಳಕು-ಬಳ್ಳಿ

ವ್ಯಾಘ್ರ……. ವ್ಯಥೆ…..ಕಥೆ

Share Button

ನೋಡುಗರ ಎದೆ ನಡುಗಿಸುವ ಪಟ್ಟೆ ಹುಲಿಯೇ ನಾನು
ಕಾಡೇ ಮಾರ್ಧ್ವನಿಸುವಂತೆ ಘರ್ಜಿಸುವ ಹೆಬ್ಬುಲಿಯೇ ತಾನು

ಎನ್ನ ಹೆಜ್ಜೆ ಸಪ್ಪಳ ಕೇಳಿ ಹರಿಣಗಳು ಪೇರಿ ಕೀಳುತ್ತಿದ್ದವು
ನನ್ನ ಆಗಮನದ ಸುದ್ದಿಯ ಕಪಿಗಳು ಕಿರಿಚಾಡಿ ಸಾರುತ್ತಿದ್ದವು

ಬಾಯಿಯ ತೆರೆದು ಅಲ್ಲಾಡದೆ ಕುಳಿತ ಮೊಸಳೆ ಮೆಲ್ಲನೆ ನೀರೊಳಗೆ ಜಾರುತ್ತಿತ್ತು
ಕಾಳಗಕ್ಕೆ ನಿಲ್ಲದೆ ಒಂಟಿ ಸಲಗ ದಾರಿ ಬಿಟ್ಟು ತೆರಳುತ್ತಿತ್ತು

ನಡೆಯುವ ಗತ್ತನ್ನು ಕಂಡ ಪ್ರಾಣಿಗಳು ದೂರವೇ ನಿಲ್ಲುತ್ತಿದ್ದವು
ಬೆಂಕಿ ಉಗುಳುವ ಕೆಂಡದುಂಡೆಯಂತಾ ಕಣ್ಣುಗಳು ಭಯ ಹುಟ್ಟಿಸುತ್ತಿದ್ದವು

ಕಾಲ ಸವೆದಂತೆಲ್ಲಾ ದೇಹದ ಬಲವೆಲ್ಲಾ ಬತ್ತಿ ಹೋಯಿತು
ಪಟ್ಟೆ ಪಟ್ಟೆಯ ಚರ್ಮವೆಲ್ಲಾ ಜೋತು ಬಿದ್ದು ಕಳೆಗುಂದಿತು

ಎನ್ನ ಕೋರೆ ಹಲ್ಲು ಕಂಡು ಹೆದರಿ ನಡುಗುವರಿಲ್ಲ
ಘರ್ಜನೆಗೆ ಬೆಚ್ಚಿ ಬೀಳುವವರಿಲ್ಲ ನೋಡಿ ಓಡುವರಿಲ್ಲ

ಮೈಯಲ್ಲಿ ಕಸುವು ಇದ್ದಾಗ ಮಾತ್ರ ಈ ಜೀವನವೆಲ್ಲಾ
ಶಕ್ತಿಗುಂದಿದ ಮರುಕ್ಷಣವೇ ಕೊಡುವ ಬೆಲೆ ಈಗಿಲ್ಲ

ಗಟ್ಟಿಯಿದ್ದಾಗ ಮೆರೆಯದೆ ಸರಳತನವ ಮರೆಯದೆ
ಒಂದಲ್ಲ ಒಂದು ದಿನ ಕೃಶವಾಗಿ ಬಾಗಲೇಬೇಕೆಂದು ಅರಿಯಬೇಕಿದೆ

   ಶರಣಬಸವೇಶ ಕೆ. ಎಂ

5 Comments on “ವ್ಯಾಘ್ರ……. ವ್ಯಥೆ…..ಕಥೆ

  1. ಅರ್ಥಪೂರ್ಣ ಕವಿತೆ ಮನಸ್ಸನ್ನು ಎಚ್ಚರಿಸುತ್ತಿದೆ.

  2. ವ್ಯಾಘ್ರತನವನು ಚೆನ್ನಾಗಿ ಸೆರೆ – ಹಿಡಿದಿದ್ದೀರಿ.
    ಮುಂದುವರಿಸಿ. ಶುಭಗಳು.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *