ಜಗದ ಜೀವದಾತ

Share Button

ಜಗದ ಕಿರಣ ಸೂರ್ಯ
ಬರದೆ ಭುವಿಯು
ಅರಳದು
ಜನರ ಕಿರಣ ರೈತ
ಇರದೆ ಜನರ
ಜೀವವುಳಿಯದು ….

ಹಸನು ಮಾಡಿ ನೆಲವ
ತಾನು ಉತ್ತು ಕಳೆಯ
ಕಿತ್ತುವ
ಕೆಸರು ಏನೇಯಿರಲಿ
ಬಿಡದೆ ನಾಟಿಮಾಡಿ
ಬಿತ್ತುವ….

ಜಾವ ನಾಲ್ಕರಲ್ಲಿ ಎದ್ದು
ಸೂರ್ಯನನ್ನು
ಬೇಡುವ
ಬೆಳೆಗೆ ನೀರು ಉಣಿಸಲು
ವರುಣನನ್ನು
ಬೇಡುವ….

ಪಚ್ಚೆ ಬೆಳೆದು ಧಾನ್ಯ
ಸಿಗಲು ಸುಗ್ಗಿಮಾಡಿ
ಹಿಗ್ಗುವ
ರಾಶಿಗಿಷ್ಟು ಪೂಜೆಗೈದು
ಲೋಕಕೆಲ್ಲಾ
ಹಂಚುವ…..

ಕಪಟವಿರದ ಮನಸಿನವನು
ಅನ್ನದಾತ
ರೈತನು
ದೇವನಂತೆ ಸಲಹುತಿರುವ
ನಮಿಸಿ ಬಂದು
ಎಲ್ಲರೂ……….

-ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ

4 Responses

  1. ಸರಳ ಸುಂದರ ಕವನ ಅಭಿನಂದನೆಗಳು ಗೆಳತಿ ಭಾಗ್ಯ.

  2. ನಯನ ಬಜಕೂಡ್ಲು says:

    ಚಂದದ ಕವನ

  3. ಶಂಕರಿ ಶರ್ಮ says:

    ಅನ್ನದಾತನ ಕುರಿತ ಸರಳ, ಸುಂದರ ಕವನ

  4. ಅನ್ನದಾತನ ಮಹಿಮೆಯನ್ನು ಬಣ್ಣಿಸಿರುವ ನಿಮಗಿದೋ ವಂದನೆ

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: