ಗ್ರಹಣ 

Share Button

ಗ್ರಹಣ
ಸೂರ್ಯ ಚಂದ್ರರಿಗಷ್ಟೇ ಅಲ್ಲ
ದೇಶಕ್ಕೂ .

ರಾಜಕಾರಣಿಗಳು,ಭ್ರಷ್ಟರು
ಉಗ್ರಗಾಮಿಗಳು,ಅತ್ಯಾಚಾರಿಗಳು
ಹಗಲುದರೋಡೆಕೋರರು, ಅಧಿಕಾರಶಾಹಿಗಳು
ಎಡಪಂಥೀಯರು, ಬಲಪಂಥೀಯರು
ಢೋಂಗಿ ಸ್ವಾಮಿಗಳು,ದಿಕ್ಕು ತಪ್ಪಿಸುವ ಮಾಧ್ಯಮಗಳು
ದೇಶಕ್ಕಡರಿಕೊಂಡಿರುವ  ರಾಹು ಕೇತುಗಳು.

ಇವರಿಂದ ನಾಡಿಗೆ
ನಿತ್ಯ ಖಗ್ರಾಸ ಗ್ರಹಣ
ಈ ಗ್ರಹಣಕೆ ಮೋಕ್ಷ ಯಾವಾಗ ?

ನಿತ್ಯ ನಿರೀಕ್ಷಿಸುತ್ತಲೇ ಇರುವೆವು.
ಬರುತ್ತಿಲ್ಲ ಜ್ಯೋತಿಷಿಗಳು
ಬರುತ್ತಿಲ್ಲ ಸ್ವಾಮಿಗಳು
ಹೇಳಲು ದೇಶದ ಭವಿಷ್ಯ
ಬಿಡಿಸಲಾಗುತ್ತಿಲ್ಲ ಗ್ರಹಣ.

ಗ್ರಹಣ ಮೋಕ್ಷ ಎಂದೋ ಏನೋ
ಹಾತೊರೆಯುತ್ತಿರುವರು ನಾಡಿಗರು.

ಗ್ರಹಣ ಸ್ಪರ್ಶವೂ ಜನರಿಂದಲೇ
ಗ್ರಹಣ ಮೋಕ್ಷವೂ ಜನರಿಂದಲೇ
ಜಾಗೃತರಾಗುವರೆಂದು ಇವರು
ದೇಶದ ಭವ್ಯ ಭವಿಷ್ಯಕೆ !

ಕೂಡಿ ಬಂದೀತೆಂದು ಕಾಲ ?
ದೇಶದ ಒಳಿತಿಗೆ
ಗ್ರಹಣ ಮೋಕ್ಷಕೆ
ನಾಡ ಹಿತರಕ್ಷಣೆಗೆ

ನಿತ್ಯ ನಿರೀಕ್ಷೆಯಲಿರುವೆವು
ಮತ್ತೊಬ್ಬ ಮಹಾತ್ಮನುದಯಕೆ
ಗ್ರಹಣ ಮೋಕ್ಷದ ಕಾಲ ನಿರ್ಣಯಕೆ
ಆತ್ಮ ನಿರ್ಭರ ನಾಡೋದಯಕೆ .

-ಪ್ರಕಾಶ ದೇಶಪಾಂಡೆ, ಹುಕ್ಕೇರಿ

   

5 Responses

  1. ಒಳ್ಳೆಯ ಚಿಂತನೀಯ ಕವನ

  2. ASHA nooji says:

    SUPER

  3. ಜಯಶ್ರೀ. ಅಬ್ಬಿಗೇರಿ says:

    ಚಿಂತನೆಗೆ ಹಚ್ಚುವಲ್ಲಿ ಯಶಸ್ಸು ಹೊಂದಿದ ಸಂದರ್ಭೋಚಿತ ಕವಿತೆ

  4. ಪ್ರಿಯಂವದಾ ಮಹಾಂತೇಶ ಅಣೆಪ್ಪನವರ says:

    ದೇಶ ಒಳಿತಿಗೆ ಗೃಹಣ ಮೋಕ್ಷಕೆ ಕಾಲ ಕೂಡಿ ಬಂದಿದೆ ಎಂದು ಸಂದೇಶದ ಕವನ ಬಹಳ ಚೆನ್ನಾಗಿದೆ.

  5. ನಯನ ಬಜಕೂಡ್ಲು says:

    ಇವತ್ತಿನ ಪರಿಸ್ಥಿತಿ ಯಲ್ಲಿ ಯಾರೊಬ್ಬನ ಭವಿಷ್ಯವನ್ನು ನಿರ್ಧರಿಸಲಾಗದು. Nice one sir

Leave a Reply to ಜಯಶ್ರೀ. ಅಬ್ಬಿಗೇರಿ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: