ಬೆಳಕು-ಬಳ್ಳಿ

ಕೃಷ್ಣ

Share Button

ಮೂಡುದಿಕ್ಕಿಗೆ ಮುಖವ ಮಾಡಿ
ಕೇಳಿಕೊಂಡೆ ಕೃಷ್ಣ ಬರಿಯ ಮೋಹವೇನೆ?
ನೆಲದ ಬುಡಕೂ ನಯನ ನೂಕಿ
ಹುಡುಕಿಹೋದೆ ಕೃಷ್ಣ ಬರಿಯ
ದೇಹವೇನೇ?
ಮರದ ನೆತ್ತಿ‌ಏರಿ ಹೋದೆ
ಮನದ‌ಏಣಿ ಹಾಕುತ
ಮಧುರ ಮನದ ಮುಗ್ಧನಾತ
ನಾನೇ ಮರಳು ಗೋಪಿಕೆ?

ಹೊನಲ ಹಾದಿ ತಡೆಯಬಹುದೇ
ರಾಧೆ ಮನದ ವೇಗವಾ
ಕಡಲ ಮೊರೆತತೂಗಬಹುದೇ?
ಕೃಷ್ಣನೊಡಲ ಮಿಡಿತವಾ?
ಅವನಿಗವಳು ಅವಳಿಗವನು
ಮನವೇ ಮಧುರ ಮಂದಿರ
ಮೀನಮೇಷ ಎಣಿಸುತಿಹುದೇ
ಮನದಘೋರಮರ್ಕಟ

ಹೇಗೆ ಮೇಘ ಸರಿಯುತಿದೆಯೋ
ಕಾಣದೆಡೆಗೆ ಚಲಿಸುತಿದೆಯೋ
ಹಾಗೇ ಬದುಕ ಸಂಭ್ರಮ
ನದಿಯ ಹೊನಲು ಮುಗಿಲ ಬಯಲು
ರಾಧಾ-ಕೃಷ್ಣ ಸಂಗಮ

– ನಾಗರೇಖಾ ಗಾಂವಕರ, ದಾಂಡೇಲಿ 

2 Comments on “ಕೃಷ್ಣ

  1. ಚಿತ್ತ ಚೋರ ಕೃಷ್ಣ ನ ಕುರಿತಾದ ಒಂದೊಂದು ಭಾವವೂ ಚಂದ. Nice madam

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *