ಮಾನವೀಯತೆ

Share Button

ತಾ ಮಾತ್ರ ಬೆಳೆದು ಇತರರ ಪ್ರಪಾತದೆಡೆ ನೂಕುವುದು ಸ್ವಾರ್ಥತೆ !
ತಾನೂ ಕಲಿತು ತನ್ನೊಡನಾಡಿಗಳಿಗೂ ಅರಿವು ಮೂಡಿಸುವುದು ನಿಸ್ವಾರ್ಥತೆ !!

ತಾನು ಕೆಟ್ಟು ಪರರನ್ನು ಕೆಡಿಸುವುದು ಧೂರ್ತತೆ !
ತನ್ನ ಬೆಳೆಸಿದವರ ಬೆನ್ನಿಗೇ ಇರಿಯುವುದು ಕಪಟತೆ !!

ಶುದ್ಧ ಮನದ ನಿಷ್ಕಲ್ಮಶ ಭಾವನೆಗಳು ಸಹಜತೆ !
ಸ್ವಾತಂತ್ರ್ಯವ ದುರುಪಯೋಗಿಸುವುದು ಅಸಹಜತೆ !!

ತಾ ಮನ ಬಂದಂತೆ ಕುಣಿದು ಮುಗ್ಧರ ದಾರಿ ತಪ್ಪಿಸುವುದು ಕೃತ್ರಿಮತೆ !
ತಾನು ಕೆಟ್ಟು ಪರರ ಮುಖಕ್ಕೆ ಮಸಿ ಬಳಿಯುವ ಗುಣ ಪೈಶಾಚಿಕತೆ !!

ತಪ್ಪಿನ ಅರಿವಾದರೂ ಒಪ್ಪಿಕೊಳ್ಳದಿರುವುದು ನಾಟಕೀಯತೆ !
ವಿವೇಕವೆಚ್ಚರಿಸಿದರೂ ತಿದ್ದಿಕೊಳ್ಳದಿರುವುದು ಮನದ ದುರ್ಬಲತೆ !!

ತನ್ನ ಪಾಡಿಗೆ ತಾನಿದ್ದು ತನ್ನಿರವನ್ನೇ ಮರೆಯುವುದು ಮುಗ್ಧತೆ !
ಜಗದ ಜಂಜಾಟ ತನಗೇಕೆಂದು ಸುಮ್ಮನಿರುವುದು ನಿರ್ಲಿಪ್ತತೆ !!

ಕಷ್ಟಸುಖಗಳೇನೇ ಬರಲಿ ಸಮಚಿತ್ತದಿ ಬಾಳ ತೇರ ಎಳೆವುದು ಧೃಡತೆ !
ತಾ ಹೊಳೆದು ಜನಮಾನಸದತ್ತ ಬೆಳಕ ಪ್ರಭೆಯ ಬೀರುವುದು ಮಾನವೀಯತೆ..!!

-ಪ್ರಮೀಳಾ ಚುಳ್ಳಿಕ್ಕಾನ.

4 Responses

  1. ನಯನ ಬಜಕೂಡ್ಲು says:

    ಬದುಕಿನಂಗಳದ ಒಳಿತು ಕೆಡುಕು ಎರಡರ ಪರಿಚಯ ನೀಡೋ
    ಸುಂದರ ಕವಿತೆ. ಚೆನ್ನಾಗಿದೆ

  2. Shankari Sharma says:

    ಮಾನವನಲ್ಲಿರುವ ಗುಣಾವಗುಣಗಳ ಸೂಕ್ಷ್ಮ ತುಲನಾತ್ಮಕ ಸುಂದರ ಕವನ ಮನ ಮಥಿಸುವಂತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: