ವಂದಿಪ ಜಗಚ್ಛಕ್ಷುವಿಗೆ

Share Button
 
ಬಂದಿತು ಸಡಗರದಿ ಸಂಕ್ರಾಂತಿ
ತಂದಿತು ನಿಸರ್ಗದಿ ಕ್ರಾಂತಿ
ಚಿಗುರಿಗೆ ಹಾತೊರೆಯುವಿಕೆ
ಹೊಸ ಚೈತನ್ಯದ ಉನ್ಮಾದಕೆ
 
ವಂದಿಸುತ ಜಗಚ್ಚಕ್ಷು ಸವಿತಗೆ 
ಆಗಮನ ಕರ್ಕಾಟಕದಿ ಮಕರಗೆ 
ಸಂಧಿಕಾಲದ ಮಕರ ಸಂಕ್ರಾಂತಿ ಮರ್ಮ
ಋತುಚಕ್ರದ ಪರಿವರ್ತನೆಯ ಪರ್ವ
 
ಚುಮು ಚುಮು ಚಳಿಯ
ಪೊರೆಯ ಸರಿಸಿ ಬೆಚ್ಚನೆಯ
ಹೂ ಬಿಸಿಲನ ಚುಂಬನೆಯ
ಧಾರೆಯ ಸುರಿಸುತ ಪ್ರೀತಿಯ
 
ಬದಲಿಸಿದ ಭಾಸ್ಕರ ಪಥವ
ಆರಂಭಿಸಿದ ಉತ್ತರಾಯಣವ
ಹೊಸ ಫಸಲಿನ ಹಿರಿಮೆಯಲಿ
ಆಚರಣೆ ಸಗ್ಗದ ಸುಗ್ಗಿಯಲಿ
 
ಪಂಚ ಕಜ್ಜಾಯ ಪೂಜಿಸುತ 
ಮಧುರ ಸಿಹಿಯನು ಹಂಚುತ
ಸಿಹಿ ಖಾರದ ಪೊಂಗಲ್ ಮೆಲ್ಲುತ
ಎಳ್ಳು ಬೆಲ್ಲದಂತಿರೋಣ ಜೀವನ ಸವಿಯುತ

.

– *ರೇಮಾಸಂ*
ಡಾ. ರೇಣುಕಾತಾಯಿ. ಎಂ.ಸಂತಬಾ.
renukatai2004@gmail. com
.

3 Responses

  1. ASHA nooji says:

    ಕವನ ಸೊಗಸಾಗಿದೆ

    • ಡಾ ರೇಣುಕಾತಾಯಿ. ಎಂ.ಸಂತಬಾ ರೇಮಾಸಂ says:

      ಧನ್ಯವಾದಗಳು.. ತಮ್ಮ ಅಮೂಲ್ಯ ಪ್ರೇರಣೆಗೆ

  2. Shankari Sharma says:

    ಸಂಕ್ರಾಂತಿಕೆ ಕವನದ ಸ್ವಾಗತ. ಚೆನ್ನಾಗಿದೆ.

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: