ಯುಗಾದಿ

Share Button

ಮತ್ತೆ ಬಂದಿತು ಹಬ್ಬ ಯುಗಾದಿ
ಹೊಸ ಸಂವತ್ಸರದ ಮೊದಲ ತೇದಿ,
ಹೊಸತನು ತರುವ ಈ ಹಬ್ಬವನು
ಆಚರಿಸುವರು ಸಡಗರದಿ.(ಪ)

ಮಾವಿನೆಲೆಗೆ ಬೇವಿನೆಲೆಯ ಬೆರೆಸಿ ಕಟ್ಟುವರು ತಳಿರು ತೋರಣ,
ಮನೆಗಳ ಮುಂದೆ ಕಂಗೊಳಿಸುವದು
ವಿಧ ವಿಧ ರಂಗೋಲಿ ಚಿತ್ರಣ..1

ಮಹಿಳೆಯರೆಲ್ಲ ಗುಡಿಗಳಿಗೆ ತೆರಳಿ ಮಾಡುವರು ದೇವಿ ದರುಶನ,
ಪಾಚಗಟ್ಟೆಗೆ ನೀರನು ಎರೆದು ಕೋರುವರೆಲ್ಲರ ಒಳಿತನ್ನ .2

ಎಲಿ ನೋಡಿದರೂ ಮರಗಿಡಬಳ್ಳಿ ಹಸಿರಾಗಿ ಕಂಗೊಳಿಸುವದು,
ಎಲೆಗಳು ಚಿಗುರಿ ಹೂಗಳ ಬಿಟ್ಟು ವಸಂತಾಗಮನ  ಸಾರುವವು.3

ಜೀವನದಾ ಸಿಹಿ ಕಹಿ ದ್ಯೋತಕವೇ ಬೇವು ಬೆಲ್ಲದಾ ಮಿಶ್ರಣ,
ಸೇವಿಸಿ ಎಲ್ಲರೂ ಬೇವು ಬೆಲ್ಲವ
ಸವಿಯುವರು ಸಿಹಿ ಭೋಜನ,
ಸಂಜೆ ಪಂಚಾಂಗದಾ.ಶ್ರವಣಾ… 4

ಯುಗಾದಿ ದೇಶೀ ವರ್ಷಾಚರಣೆಯ ಹಬ್ಬವೆಂದು ನಮಗಭಿಮಾನ,
ಇಂಥ ಹಬ್ಬಗಳ ಆಚರಿಸೋಣ
ನಮ್ಮ ಸಂಸ್ಕೃತಿಯ ಮೆರೆಯೋಣಾ,
ಮಕ್ಕಳಿಗದನೇ ತಿಳಿಸೋಣಾ..5

ಮತ್ತೆ ಬಂದಿತು ಹಬ್ಬ ಯುಗಾದಿ..‌..

ಮಾಲತೇಶ ಹುಬ್ಬಳ್ಳಿ

6 Responses

  1. ಯುಗಾದಿ ಹಬ್ಬದ ಆಚರಣೆಯ ಅನಾವರಣದ ಕವನ ಚೆನ್ನಾಗಿ ಮೂಡಿಬಂದಿದೆ.. ಸಾರ್

  2. ನಯನ ಬಜಕೂಡ್ಲು says:

    ಚಂದದ ಕವನ

  3. Padma Anand says:

    ಹಬ್ಬದಾಚರಣೆಯನ್ನು ಸೊಗಸಾದ ಕವನದಲ್ಲಿ ಸೆರೆಹಿಡಿದಿದ್ದೀರಿ. ಅಭಿನಂದನೆಗಳು.

  4. Maltesh Hubli says:

    ಧನ್ಯವಾದಗಳು

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: