ತಲೆಮಾರು

Share Button

ಹೊಸ ತಲೆಮಾರಿನಲಿ
ನಮ್ಮ ಮಕ್ಕಳೇ
ನಮಗೆ ಅಪರಚಿತರಾದರೇಕೊ ಕಾಣೆ,

ಮಕ್ಕಳು
ಕಷ್ಟಕ್ಕೆ- ಭಾವಕ್ಕೆ
ಹೆಗಲು ಕೊಡದ ಮೇಲೆ
ಕರುಳಿನ ಚೂರುಗಳಲ್ಲ ಅವರು,

ಕಳೆದ ಜನುಮದ
ಸಾಲದ ಬಾಕಿಯ
ವಸೂಲಿಗಾರರು,

ಹೃದಯ ಹೆತ್ತಿದಕ್ಕೆ
ಧನ್ಯತೆ ಅನುಭವಿಸದ ಮೇಲೆ
ನಾವು ಮಾಡಿದ ಪಾಪದ
ಪ್ರತಿರೂಪಗಳು,

ಸಂಸಾರ ಸಾಗರದಲ್ಲಿ
ಮುಳುಗುವಾಗ ದೋಣಿಯಾಗಿ
ಮಕ್ಕಳು ಬರದ ಮೇಲೆ

ಮಕ್ಕಳಲ್ಲ ಅವರುಗಳು
ದೃಷ್ಟಿಯಿರದ ಕಣ್ಣುಗಳು

-ವಿದ್ಯಾ ವೆಂಕಟೇಶ್. ಮೈಸೂರು

7 Responses

  1. ನಾಗರತ್ನ ಬಿ. ಅರ್. says:

    ಸರಳ ಸುಂದರ ಕವನ ಚೆನ್ನಾಗಿದೆ ಎಂದು ಹೇಳುತ್ತೇನೆ.ಆದರೆ ಬದುಕಿನಲ್ಲಿ ನಾವು ಆದಷ್ಟು ಸಕಾರಾತ್ಮಕ ಚಿಂತನೆ ಮಾಡಬೇಕು ಎಂದು ನನ್ನ ಅನಿಸಿಕೆ ಈ ನಿಟ್ಟಿನಲ್ಲಿ ಯೋಚಿಸು ಸೋದರಿ ವಿದ್ಯಾ

  2. ನಯನ ಬಜಕೂಡ್ಲು says:

    ಇಂದಿನ ವಾಸ್ತವವನ್ನು ಬಹಳ ಚೆನ್ನಾಗಿ ವಿವರಿಸಲಾಗಿದೆ.

  3. . ಶಂಕರಿ ಶರ್ಮ says:

    ಅರಗಿಸಲಾಗದ ಕಟುಸತ್ಯವೊಂದನ್ನು ಅನಾವರಣಗೊಳಿಸಿದ ಕವನ ಚೆನ್ನಾಗಿದೆ.

  4. Padma Anand says:

    ಜಾಳು ಜಾಳಾಗುತ್ತಿರುವ ಸಂಬಂಧಗಳ ಮೇಲೆ ಕ್ಷ -ಕಿರಣ ಬೀರುತ್ತಿದೆ ನಿಮ್ಮ ಸುಂದರ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: