ನಿರ್ವಾಣ ಸಂಜೆಗೆಂತಹ ಶೋಭೆ!

Share Button

ಕಣ್ಣುಮುಚ್ಚಿದರೆ ಕಾಣುವುದೆ ಬೇರೆ
ಕಣ್ಣು ತೆರದರೆ ಉಂಟು ಬೇಕೆಂಬ ಧಾರೆ

ಬೇರೆ ಧಾರೆಗಳೆಲ್ಲ ಸರಿದು ಸೋರೆ
ಆಕಾಶದುದ್ದಕ್ಕು ನಗುವ ಬೆಳಗಿನ ಮೋರೆ!

ಮೋರೆಯೆಂದರೆ ಸದರೆ ಅಡಿಯಿಂದ ಮುಡಿವರೆಗೆ
ಮುಡಿಯ ಕೊಡುವುದೆ ದಿಟ್ಟಮನದವರಿಗೆ

ಮನಕೆ ಮಜ್ಜನಬೇಕು ಚಿರನಿದ್ರೆವರೆಗೆ
ನಿದ್ರೆಗೈಯಲುಬಹುದೆ ಒಳಗಣೊಳಗಣ ಆತ್ಮಸಖ?

ಸಖನೆಂಬ ಸುಖಕೆ ಅನ್ಯಮಾದರಿಯುಂಟೆ?
ಉಂಟೆ ಉಂಟೆಂಬ ಯಾವ ಹಂಗು?

ಹಂಗುಹರಿಯುವ ಮುನ್ನ ಕೇಶದೆಳೆಗಳ ಕಿತ್ತು
ಕಿತ್ತಡಿಯ ನಿರ್ವಾಣ ಸಂಜೆಗೆಂತಹ ಶೋಭೆ!

ಮಹೇಶ್ವರಿ.ಯು, ಕಾಸರಗೋಡು

4 Responses

  1. ನಯನ ಬಜಕೂಡ್ಲು says:

    ಆವರಿಸುವ ಸುಂದರ ಸಂಜೆಯಷ್ಟೇ ಸೊಗಸಾದ ಕವನ.

  2. ವಿದ್ಯಾ ಶ್ರೀ ಎಸ್ ಅಡೂರ್ says:

    ಮನಕೆ ಮಜ್ಜನ ಬೇಕು ಚಿರನಿದ್ರೆ ವರೆಗೆ……. ಸೂಪರ್

  3. ಶಂಕರಿ ಶರ್ಮ says:

    ಸೊಗಸಾದ ಕವನ

  4. km vasundhara says:

    ಒಂದೊಂದು ಅಂತ್ಯ ಸಾಲಿನ ಒಂದು ಪದವನು ಹಿಡುದು ಕೊಂಡಿ ಬೆಸೆದು ವಿನೂತನವಾಗಿ ಕವನ ರಚನೆಗೊಂಡಿದೆ. ಚೆಂದದ ಕವಿತೆ.

Leave a Reply to km vasundhara Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: