ಬೆಳಕು-ಬಳ್ಳಿ

ಅರಿವು

Share Button

ಏನಾದರೂ ಆಗಲಿ ಸುಮ್ಮನಾಗದಿರು
ಬದುಕು ಮುಂದೆ ಸಾಗುತ್ತಲೇ ಇರಲಿ
ನೋವು ನಲಿವುಗಳು ಶಾಶ್ವತವಲ್ಲ
ಬದುಕಿನಲ್ಲಿ ಭರವಸೆಯು ಜೊತೆಗಿರಲಿ

ಜೊತೆಗೆ ಯಾರಿರಲಿ ಯಾರಿರದಿರಲಿ
ಮನ ಎಂದೆಂದಿಗೂ ಧೃತಿಗೆಡದಿರಲಿ
ಮುಂದಿಟ್ಟ ಒಂದೊಂದು ಹೆಜ್ಜೆಯೂ
ಮುಂದುವರೆಯಲಿ ಹಿಂಜರಿಯದೆ

ಯಾರ್ಯಾರೋ ಬಂದು ತಮಗನಿಸಿದಂತೆ
ಆಟವನ್ನು ಆಡಿಹೋಗುವ ಮೈದಾನವಲ್ಲ
ನಮ್ಮ ಬದುಕಿನಲಿ ನಮ್ಮ ಮನಸ್ಸಿನಲಿ
ನಮ್ಮಂತರಂಗ ಬೇರೆ ಯಾರದೋ ಸ್ವತ್ತಲ್ಲ

ಯಾರ್ ಯಾರದೋ ಚುಚ್ಚು ಮಾತಿಗೆ
ನೊಂದು ಸುಮ್ಮನೆ ಸುರಿಸದಿರಿ ಕಣ್ಣೀರು
ಅವರವರ ಕಾರ್ಯ ಮುಗಿದ ಮೇಲೆ
ನಮ್ಮ ಕನಸಿಗೆರಚುವರು ತಣ್ಣೀರು

ನಮ್ಮರಿವು ನಮಗಿರಬೇಕು ಜೀವನದಿ
ಕಣ್ಣ ಮುಂದೆ ಗುರಿಯು ಇರಬೇಕು
ಬಿಟ್ಟ ಬಾಣವು ಗುರಿಯನ್ನು ತಲುಪಿ
ಯಶಸ್ಸು ದೊರೆಯುವಂತಿರಬೇಕು

ನಮ್ಮದೇ ಬದುಕು ನಮ್ಮದೇ ಪಯಣ
ಶಿಸ್ತು ಬದ್ಧತೆಯಿಂದ ಕೂಡಿರಲಿ ಜೀವನ
ಆರು ಮೂರಾಗಲಿ ಮೂರು ಆರಾಗಲಿ
ಮರೆಯದೆ ತೋರೋಣ ನಮ್ಮ ಗಟ್ಟಿತನ

ನಾಗರಾಜ ಜಿ. ಎನ್. ಬಾಡ

12 Comments on “ಅರಿವು

  1. ನಮ್ಮದೇ ಶಿಸ್ತು, ನಮ್ಮದೇ ಪಯಣ ಈ ಜೀವನ. ಬಹಳ ಚಂದದ ಕವಿತೆ ಸರ್

  2. ಆರು ಮೂರಾಗಲಿ ಮೂರು ಆರಾಗಲಿ
    ಜೀವನ ಮುಂದಕೆ ಸಾಗಲಿ….ಧೈರ್ಯ ತುಂಬುವ ಸ್ಫೂರ್ತಿದಾಯಕ ಕವನ ಚೆನ್ನಾಗಿದೆ

  3. ಏನಾದರಾಗಲಿ ಸುಮ್ಮನಿರು ಎಂದು ನಾನು ನನ್ನ ಮನಕೆ
    ಸಮಾಧಾನ ಮಾಡುತ್ತಿರುತ್ತೇನೆ, ಅದು ಸ್ವಲ್ಪವಷ್ಟೇ ಕೇಳಿಸಿಕೊಂಡು
    ನನಗೇ ಒಮ್ಮೊಮ್ಮೆ ಉಲ್ಟಾ ಹೊಡೆಯುತ್ತದೆ, ನೀನಲ್ಲ ಬಾಸು, ನಾನು ಎಂದು!

    ಅಂತಹುದರಲ್ಲಿ ಏನಾದರಾಗಲಿ ಸುಮ್ಮನಾಗದಿರು ಎಂದು ನಿಮ್ಮ ಪದ್ಯದ
    ಮೊದಲ ಸಾಲು ಓದಿದಾಗ ಹ್ಙಾಂ ಎಂದುಕೊಂಡೆ. ಓದುತ್ತಿದ್ದಂತೆ,
    ಹೌದು, ಇವರು ಸಹ ಬೇರೊಂದು ಬಗೆಯಲಿ ಮುಖಾಮುಖಿಯಾಗಿದ್ದಾರೆಂದು
    ಸಮಾಧಾನಿಸಿ ಕೊಂಡೆ. ಅಂತೂ ನಿಮ್ಮ ಕವಿತೆಯಿಂದ ಏನಾದರೊಂದನು
    ಕೊಳ್ಳದೇ ನಾ ಬಿಡೆನು. ಲಯವಿಲ್ಲದ ಬದುಕನ್ನು ಕುರಿತು ಲಯಬದ್ಧವಾಗಿ
    ಬರೆಯು ನೀವು ನನಗೆ ಇಷ್ಟ; ಬರೆಹಗಳು ಇನ್ನೂ ಬರಲಿ, ಪ್ರಣಾಮಗಳು

    1. ತಮ್ಮ ವಿಶ್ಲೇಷಣೆಯನ್ನು ಓದಿ, ತುಂಬ ಖುಷಿ ಆಯ್ತು ಸರ್, ಧನ್ಯವಾದಗಳು

  4. ಮೂರನೇ ಪ್ಯಾರಾ ಇಷ್ಟವಾಯಿತು.

    ಸ್ವಲ್ಪ ಬೋಧನಾಶೈಲಿ ಮತ್ತು ವರದಿಗಾರಿಕೆ ಶೈಲಿ ಬಿಟ್ಟು
    ನಮ್ಮೊಳಗೆ ನಾವೇ ಮಾತಾಡಿಕೊಳ್ಳುವ ಶೈಲಿಯಲಿ ನೀವು ಪ್ರಯತ್ನ
    ಪಟ್ಟರೆ ಇನ್ನಷ್ಟು ಕವಿತೆಯ ಗಂಧ ಪಸರಿಸೀತು, ಇದು ನನ್ನ ಅನಿಸಿಕೆ.
    ಅನ್ಯಥಾ ಬೇಡ. ನಮಸ್ಕಾರ

  5. ತಮ್ಮ ಸಲಹೆ ಸೂಚನೆಗಳಿಗೆ ಅನಂತ ಧನ್ಯವಾದಗಳು..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *