ತಾಜ್ ಮಹಲನ್ನು ಕಟ್ಟಿಸಿದವರು ಯಾರು ಎಂದರೆ ‘ಷಾಜಹಾನ್’ ಎಂದು ಎಲ್ಲರಿಗೂ ಗೊತ್ತು. ಆದರೆ ಅಲ್ಲಿ ಹಗಲಿರುಳೆನ್ನದೆ ನಿಜವಾಗಿ ದುಡಿದ ವಾಸ್ತುಶಿಲ್ಪಿಗಳ, ಕಾರ್ಮಿಕರ ಹೆಸರು ಎಲ್ಲಾದರೂ ಇದೆಯೆ? ಇಲ್ಲ.
ಬೇಲೂರು ಮತ್ತು ಹಳೇಬೀಡಿನ ಶಿಲ್ಪವೈಭವವನ್ನು ಸವಿಯುವಾಗ ಹೊಯ್ಸಳ ರಾಜ-ರಾಣಿಯರಾದ ವಿಷ್ಣುವರ್ಧನ-ಶಾಂತಲೆಯರ ಹೆಸರು ಥಟ್ಟನೇ ತಲೆಗೆ ಬರುತ್ತದೆ. ಆಮೇಲೆ ‘ಜಕ್ಕಣಾಚಾರಿ’ಯೂ ನೆನಪಾಗುತ್ತಾನೆ. ಆದರೆ, ಅವನೊಂದಿಗೆ ಕೈಜೋಡಿಸಿದ ಸಹಸ್ರಾರು ಶಿಲ್ಪಿಗಳ ಹೆಸರನ್ನು ಚರಿತ್ರೆಯಲ್ಲಿ ಓದಿದ್ದೇವೆಯೇ?ಇಲ್ಲ.
ಎಷ್ಟೋ ಮಂದಿ ತಮ್ಮ ಸೀಮಿತ ಆದಾಯದಲ್ಲಿ, ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಚಾರ ಬಯಸದೆ ಸಮಾಜಕ್ಕೆ ಉಪಯುಕ್ತವಾದ ಕೆಲಸಗಳನ್ನು ಮಾಡಿರುತ್ತಾರೆ.ಇವರು ನಿಜವಾಗಿಯೂ unsung hero ಗಳು. ನಮ್ಮ ನಡುವೆ ಇದ್ದ/ಇರುವ unsung hero ಗಳನ್ನು ಗುರುತಿಸಿ ಅವರ ಸಾಧನೆ, ಸೇವೆಗಳ ಬಗ್ಗೆ ಪುಟ್ಟ ಲೇಖನ ಬರೆಯಬೇಕೆನಿಸಿದೆಯೇ?
ಆಸಕ್ತಿ ಇದ್ದರೆ ಬರೆದು editor@52.55.167.220 ಗೆ ಇ-ಮೈಲ್ ಮೂಲಕ ಕಳುಹಿಸಿ. ‘ತುಝೇ ಸಲಾಂ’ ಅಂಕಣದಲ್ಲಿ ಪ್ರಕಟಿಸಲಾಗುವುದು.
– ಸಂಪಾದಕಿ
ನಿಮ್ಮ ಅನಿಸಿಕೆಗಳು…