‘ಪೆದ್ದ’ರಾಮನ ಬುದ್ದಿವಂತಿಕೆ..

Share Button

ಮೈನಂನಾಗೇಶ

ಮದುವೆ ಮುಂಜಿ ಜವಾಬ್ದಾರಿ
ಮಕ್ಕಳ ಬದುಕಿಗೊಂದೊಂದು ದಾರಿ
ಮುಗಿಸಿದ ಸಂತೃಪ್ತಿಗೆ ರಾಮ
ಕಲಿತ ಚಟ ಕುಡಿತದ ಬ್ರಹ್ಮ..
ಯಾಕೊ ಅತಿಯಾಯ್ತೆಂದು ಸತಿ
ಜಾಡಿಸಿಬಿಟ್ಟಳು ಆ ರಾತ್ರಿ
ಕುಡಿದು ಬಂದವನ ಮೇಲೆ
ಕಾರುತ್ತ ಮೊನೆಚಿನ ವಾಗ್ದಾಳಿ..

‘ನೀವೊಬ್ಬರೆ ಏನು ನಿರಾಳ ?
ಮುಗಿದಿದೆ ನನದೂ ಹೊರೆಯಾಳ
ಕಳೆದಿದೆ ಹೊಣೆಗಾರಿಕೆ ಮೊತ್ತ
ನಾನು ಜತೆ ಕುಡಿಯುವುದೆ ಸೂಕ್ತ..!
ನಡೆಯಿರಿ ಈಗಲೆ ಬಾರಿಗೆ
ಕುಡುಕ ದಂಪತಿ ದರಬಾರಿಗೆ’

ಮಿಕಮಿಕ ಕಣ್ಬಿಟ್ಟ ರಾಮ
ಮುಗ್ದ ನೋಡುತ್ತ ಸತಿವ್ರತೆಯ

ನಿಜ ನಿರಾಳದೆ ಕುಡಿತ ಚೆನ್ನ
ನೆಮ್ಮದಿಯನುಭವಿಸೊ ಪರಮ..
ನಿನಗೇನೊ ಕುಡಿವ ಹಂಬಲ
ನಿನ್ನಾಸೆ ತೀರಿಸೆ ಸಕಾಲ –
ಹೇಳು ಪೂರೈಸೆ ನಿನ್ನಾ ಛಲ
ನಾ ಕುಡಿಯಬೇಕೆ ಮೊದಲ ಸಲ ?
ನನ್ನೂ ಕುಡುಕನ ಪಟ್ಟಕೆ ನೂಕಲಾ??’

ಎಂದವನ ನೋಡುತ ಗರ
ಬಡಿದಂತೆ ಕೂತಳಾ ಸರಳ..!

Alcohol

– ಮೈನಂನಾಗೇಶ

 

8 Responses

  1. Ekoramaradhya B M Aradhya says:

    Suuuuper

  2. Hema says:

    ಚೆನ್ನಾಗಿದೆ….:)

  3. ಧನ್ಯವಾದಗಳು ಹೇಮಾರವರೆ. ಅಂದಹಾಗೆ ಇದು ಮೂಲತಃ ಬರಿಯ ಕಲ್ಪನೆಯಲ್ಲ. ಚತುರ ವಾಗ್ಮಿಯೊಬ್ಬರ ನಿಜ ಜೀವನದ ಸಂಧರ್ಭವೊಂದನ್ನು ಕವನಕ್ಕಿಳಿಸಿದ್ದೇನೆ ಅಷ್ಟೆ 🙂

  4. Sneha Prasanna says:

    ಚೆನ್ನಾಗಿದೆ …ಸರ್ ಇಷ್ಟವಾಯಿತು..

  5. ತುಂಬಾ ಧನ್ಯವಾದಗಳು ಸ್ನೇಹಾ ಪ್ರಸನ್ನಾರವರೆ 🙂

  6. savithri s bhat says:

    ಚೆನ್ನಾಗಿದೆ

Leave a Reply to Sneha Prasanna Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: