ಜ್ಞಾನ ಯಾನ, ಅನುಭವ ಘನ..!

Share Button
Nagesha MN

ಮೈನಂನಾಗೇಶ

ಪುಸ್ತಕ ಮಸ್ತಕಕೇರಿಸಿ
ಹೊತ್ತು ಮೆರೆಸಿದೆ ಸುತ್ತಿ
ಭಟ್ಟಿ ಇಳಿದೀತೆ ತಳಕೆ ?
ತಲೆಯೊಳಗಿನ ಬುಡಕೆ ||

ಸಾಲದೆಂದರು ಓದಿದೆ
ಬಿಡದೆ ಪುಟ ಪುಟವನ್ನು
ಉರು ಹೊಡೆದರು ಶುದ್ಧ
ಕಂಠಪಾಠ ಯಂತ್ರ ಸದ್ದ ||

ಅರೆದು ಕುಡಿದರೆ ಸಾಕೆ ?
ಅರಗಿಸಿಕೊಳ್ಳಬೇಕೆಲ್ಲಾ..
ಎಂದವರ ನಂಬಿ ಕೂತೆ
ಅಕ್ಷರಕ್ಷರಕು ತಿಣುಕಾಡುತೆ ||

ಮಸ್ತಿಷ್ಕದ ತೊಟ್ಟಿಗೆಲ್ಲ
ತುಂಬಿದ್ದೆ ಬಂತು ಕಸಕಡ್ಡಿ
ಕಸರತ್ತು ರಸ ತೆಗೆಯೆ
ಗೊಂದಲ ನೂರು ಬಗೆಯೆ ||

ಬದಿಗಿಟ್ಟ ಹೊತ್ತಂದೊಂದು
ಕಲಿಸಿತು ಜೀವನ ಪಾಠ
ಅನುಭವ ವೇದ್ಯ ಸುವೈದ್ಯ
ಜ್ಞಾನ ಮಾರ್ಗದರ್ಶಿ ಸಾನಿಧ್ಯ ||

.
– ಮೈನಂನಾಗೇಶ

.

 

Follow

Get every new post on this blog delivered to your Inbox.

Join other followers: