ಸ್ಮಿತವಿರಲಿ ವದನದಲಿ

Share Button

ಕತ್ತಿಯಂತಹ ಹರಿತ ಮಾತೂ ಶರಣಾಗುವುದು
ನಗುವೊಂದೇ ಆದಾಗ ಉತ್ತರ,
ಮೌನದ ಮುದ್ರೆಯೊತ್ತಿ  ಆಗು ಹೃದಯವೇ
ನೀ ಮನಗಳಿಗೆ
ನಗುವಲ್ಲೇ ಹತ್ತಿರ .

ನಿರಾಳ ಹೃನ್ಮನ ಎಲ್ಲವ ಮರೆತು
ಕ್ಷಣಕಾಲ ಒಮ್ಮೆ
ಹಿತವಾಗಿ ನಗಲು ,
ಸಿಂಗಾರಗೊಳ್ಳುವುದು  ಈ ನಗುವಿನಿಂದಲೇ
ಕಂಡವರ ಮನ ಮುಗಿಲೂ.

ಒಂದೊಂದು ಊರಲ್ಲೂ ಒಂದೊಂದು ಭಾಷೆ
ಆದರೆ ನಗುವಿಗಿಲ್ಲ  ಇದಾವುದರ  ಹಂಗು ,
ಎಲ್ಲಾ ಜಾತಿ ಧರ್ಮಗಳ ಮರೆಸಿ
ಬೆಸೆಯುವುದು ಹೃದಯಗಳ ಈ ಸುಂದರ ನಗು “.

ಉಮ್ಮಳಿಸಿ  ಬರುವ ದುಃಖವೂ
ಹೊಂದುವುದು ತುಸು ಸಮಾಧಾನ
ಒಂದು ನಗು ಮೊಗವ ಕಂಡಾಗ ,
ನಗುವೇ ಹೀಗೆ, ಒಂದು ಸಾಂತ್ವನ,
ನಿವಾರಿಸುವುದು ಮೆಲ್ಲನೆ ನೋವಿನ ಆವೇಗ .

ಪ್ರೀತಿಯಲ್ಲೂ ನಗುವೇ …..
ನಿನ್ನದೇ ಪಾತ್ರ ,
ಕಣ್ಣ ಭಾಷೆಯೊಡನೆ , ತುಟಿಯಂಚಿನ ನಗುವೊಂದೇ
ಮನಗಳ ಬೆಸೆವ ಸೂತ್ರ.

ಮಾಸದಿರಲಿ ಎಂದಿಗೂ
ತುಟಿಯಂಚಿನ ಅರೆಬಿರಿದ  ಮುಗುಳು,
ಈ ನಗುವೇ ಆಗಬಲ್ಲುದು ಅವೆಷ್ಟೋ
ಮುದುರಿದ ಮನಸುಗಳ ಹಾದಿಯಲ್ಲಿ
ಆತ್ಮವಿಶ್ವಾಸದ ಕಂದೀಲು .

– ನಯನ ಬಜಕೂಡ್ಲು

9 Responses

  1. ನಗುವಿಗಿಲ್ಲ….ಭಾಷೆ…ಯಾವುದೇ ಜಾತಿ ಧರ್ಮ ಗಳ ಹಂಗು…
    ಅರ್ಥ ಪೂರ್ಣ ವಾದ ಸಾಲುಗಳು…ಚಂದದ ಕವನಕಟ್ಟಿಕೊಟ್ಟ ನಿಮಗೆ ಧನ್ಯವಾದಗಳು ನಯನ ಮೇಡಂ.

  2. ಚಂದದ ಅರ್ಥಗರ್ಭಿತವಾದ ಕವನ ವಂದನೆಗಳು

  3. ಅರ್ಚನಾ says:

    ಸೂಪರ್

  4. Dr Krishnaprabha M says:

    ಚಂದದ ಕವನ

  5. Hema says:

    ನಿಜ. ಮುಖದಲ್ಲಿ ಮುಗುಳುನಗೆಯಿದ್ದರೆ ಅಲಂಕಾರ ಸಂಪೂರ್ಣವಾಗುವುದು.ನವಿರಾದ ಭಾವನೆಯನ್ನು ಮೂಡಿಸುವ ‘ನಗೆಮೊಗ’ದ ಕವನ ಬಲು ಇಷ್ಟವಾಯಿತು.

  6. Padma Anand says:

    ನಗೆಯ ಎಲ್ಲ ಮೊಗಗಳ ಸುಂದರ ಅನಾವರಣ. ಕವಿತೆ ಓದಿ ಮುಗಿಸಿದಾಗ ತುಟಿಯಂಚುನಲ್ಲಿ ಒಂದು ಹೂ ನಗೆ ಅರಳಿತು.

  7. dharmanna dhanni says:

    ಅರ್ಥಪೂರ್ಣವಾಗಿದೆ..ಧನ್ಯವಾದಗಳು

  8. . ಶಂಕರಿ ಶರ್ಮ says:

    ಹೌದು… ಕಿರುನಗೆಯು ಆತ್ಮವಿಶ್ವಾಸದ ಕಂದೀಲು…ಸೊಗಸಾದ ಭಾವ ಲಹರಿ..

  9. ಆಶಾನೂಜಿ says:

    ಬಹಳ ಚೆನ್ನಾಗಿದೆ

Leave a Reply to ಗಾಯತ್ರಿ ಸಜ್ಜನ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: