ಹೋರಾಟ

Share Button


ಮಲೆನಾಡ ಹಸಿರ
ಬೆಟ್ಟಗಳ ನಡುವೆ
ಕುಳಿತು ಬರೆಯಲಿಲ್ಲ
ಈ ಕವನಗಳ…..

ಬಯಲು ಸೀಮೆಯ
ಬರಡು ಭೂಮಿಯ ನಡುವೆಯೇ
ಎದೆಯ ನೆಲದೊಳಗೆ
ಹಸಿರು ಹಾಸಿಕೊಂಡು
ಅಡುಗೆ ಮನೆಯ ಒಗ್ಗರಣೆಗಳ
ಘಾಟಿನ ನಡುವೆ
ಮಲ್ಲಿಗೆ ಸಂಪಿಗೆಯ
ಘಮ ಘಮ ಸುವಾಸನೆಯ
ಊಹಿಸಿಕೊಂಡು
ಹೃದಯದ ನಾಳಗಳ ಕತ್ತರಿಸುವ
ಒರಟು ಮಾತುಗಳ ನಡುವೆ
ಸುರಿವ ರಕುತವ
ಶಾಯಿಯಾಗಿಸಿಕೊಂಡು
ಬದುಕಲೇಬೇಕೆಂಬ
ಚೈತನ್ಯ ಶಕ್ತಿಯ ಉಳಿಸಿಕೊಂಡು
ಸಾಧಿಸಲೇಬೇಕೆಂಬ ಸ್ಪೂರ್ತಿಯ
ಜೀವಂತವಾಗಿಸಿಕೊಂಡು
ಬರೆದವು ಈ ಕವನಗಳು

ಬರೀ ಕವನಗಳಲ್ಲ
ಹೆಣ್ಣಿನ ಅಸ್ತಿತ್ವದ
ಹೋರಾಟದ ಪ್ರತೀಕ
ಈ ಕವನಗಳು

-ವಿದ್ಯಾ ವೆಂಕಟೇಶ, ಮೈಸೂರು

16 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ

  2. ನಾಗರತ್ನ ಬಿ. ಅರ್. says:

    ಹೆಂಗೆಳೆಯರು ಇರುವ ಪರಿಸರ ಪರಿಸ್ಥಿತಿ ಯಲ್ಲಿ ಯೇ ತಮ್ಮ ಅನುಭವದ ಮೂಸೆಯಲ್ಲಿ ಅದ್ದಿ ಉಣಬಡಿಸುವ ರೀತಿ ತಾವಿದ್ದ ಲ್ಲಿಯೇ ಕಲ್ಪಿಸುವ ಕಲೆಗಾರಿಕೆಯ ಹಿಂದಿನ ಪರಿಶ್ರಮವನ್ನು ಕವನದಲ್ಲಿ ಕಟ್ಟಿಕೊಟ್ಟಿರುವ ಬಗೆ ಚೆನ್ನಾಗಿ ಮೂಡಿ ಬಂದಿದೆ.. ಚಿಕ್ಕ ದರಲ್ಲಿ ದೊಡ್ಡ ಚಿಂತನೆ.. ಅಭಿನಂದನೆಗಳು ಸೋದರಿ ವಿದ್ಯಾ.

  3. Padma Anand says:

    ಛಲವಂತಿಕೆಯನ್ನು ಹುರಿದುಂಬಿಸುವ ಉತ್ಸಾಹೀ ಕವನ.

  4. ಶಂಕರಿ ಶರ್ಮ says:

    ಉಳಿವಿಗಾಗಿ ನಿರಂತರ ನಡೆಯುವ ಹೆಣ್ಣಿನ ಹೋರಾಟವನ್ನು ಭಾವಪೂರ್ಣವಾಗಿ ವ್ಯಕ್ತಪಡಿಸಿದ ಕವನ ತುಂಬಾ ಚೆನ್ನಾಗಿದೆ ವಿದ್ಯಾ ಮೇಡಂ.

  5. Veena says:

    Nice kavana Vidya ide rete nima kavana munduvarsi

  6. Vinutha says:

    ತುಂಬಾ ಅರ್ಥಪೂರ್ಣ ಕವನ
    Keep Up the good work

  7. Sumithra says:

    Very nice Vidya

  8. Anonymous says:

    Very nice

  9. padmini says:

    ಲಯಬದ್ಧ ಭಾವಾಭಿವ್ಯಕ್ತಿ ಕವನವಾದೀತು.

  10. Hema says:

    ಚೆಂದದ ಕವನ.

  11. ತುಂಬಾ ಚೆಂದದ ಸಾಲುಗಳು ಮನಸಿಗೆ ಇಂಪು ನೆಮ್ಮದಿ ಕೊಡುವ ಕವನ ತುಂಬಾ ಇಷ್ಟವಾಯಿತು

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: