ಅವರಿವರ ಮಾತು

Share Button

ದುಡಿದು ಬಂದದ್ದರಲ್ಲಿ ಉಳಿಸಿದೆ ಸ್ವಲ್ಪ ಹಣ
ಹಿಂದೆ ಮಾತನಾಡಿದರು
ಇವನೆಂತಹ ಜಿಪುಣ
ಬಂದದ್ದೆಲ್ಲವನ್ನೂ ವ್ಯಯಿಸುತ್ತಿದ್ದವನ
ಕಂಡೆಂದರು ಭವಿಷ್ಯಕ್ಕೆ ಬೇಡವೇ ಹಣ

ಬೇಡಿದವನಿಗೆ ನೀಡಿದೆ , ಆಗೆಂದರು
ಕೊಡದಿರಿ, ಇವರಾಗುತ್ತಾರೆ
ದುಡಿಯದ ಸೋಮಾರಿ ಜನ
ಮುಂದಕ್ಕೆ ಹೋಗೆಂದೆ
ಮನೆಯ ಬಳಿ ಬಂದವನ,
ಹೇಳಿದರು ಇರುವಾಗ ಮಾಡಬಾರದೇ
ಕೈ ಎತ್ತಿ ದಾನ

ಸರಳವಾಗಿದ್ದೆ, ಸಂತೋಷದಿಂದಿದ್ದೆ
ಹಳಿದರು ಇದೆಂತಹ ಜೀವನ
ಊರು, ದೇಶ ಸುತ್ತಿ ಸುಖಿಸಿ ಬಂದೆ
ಆಗೆಂದರು ನೋಡೀ ಸ್ವಾಮಿ
ಇವರ ಶೋಕೀನ

ಶಾಂತ ಸ್ವಭಾವದವನಿದ್ದೆ
ಬಂತೊಂದು ಮಾತು
ತಿನ್ನಬೇಕು ನೀವು ಸ್ವಲ್ಪ ಹೆಚ್ಚು
ಉಪ್ಪು, ಹುಳಿ ಖಾರಾನ
ಕೆಲವೊಮ್ಮೆ ರೇಗಾಡಿ, ಕೂಗಾಡಿದೆ
ಹೇಳಿದರು ಯಾಕೆ ಜಾಸ್ತಿ
ಮಾಡ್ಕೋತೀರಿ ಬಿಪಿ ನಾ

ಅವರಿವರ ಮಾತಿಗೆ ತೋರಿದೆ ಕಿವುಡುತನ
ಬದುಕಿದೆ ನನ್ನಷ್ಟಕ್ಕೆ ನನ್ನ ಜೀವನ
ಇತರರಿಗಾಯಿತೋ ಇಲ್ಲವೋ
ತಿಳಿಯೆ ಮಾರ್ಗದರ್ಶನ
ಯಾರಿಗಾದರೂ ತೊಂದರೆಯಾಗಿದ್ದಕ್ಕಿಲ್ಲಾ
ಒಂದೂ ನಿದರ್ಶನ

-ನಟೇಶ (ನಾರಾಯಣ ಮೂರ್ತಿ)
.

6 Responses

  1. ನಯನ ಬಜಕೂಡ್ಲು says:

    ಅರ್ಥಗರ್ಭಿತ ಕವನ. ಹೇಗೇನೇ ಇದ್ದರೂ ಜನ ಎಂದಿಗೂ ಆಡಿಕೊಳ್ಳುವುದನ್ನು ಬಿಡಲಾರರು. ಏಕೆಂದರೆ ಹಲವರಿಗೆ ಇದೊಂದು ಕೆಟ್ಟ ಚಟ

  2. ನಾಗರತ್ನ ಬಿ. ಅರ್. says:

    ಸರಳ ಸುಂದರ ಕವನ ಚೆನ್ನಾಗಿದೆ.

  3. Padma Anand says:

    ಚಂದದ ಉದಾಹರಣೆಗಿಂದ ಕೂಡಿದ ಸುಂದರ ವಾಸ್ತವಿಕ ಕವನ. ಅಭಿನಂದನೆಗಳು.

  4. ಶಂಕರಿ ಶರ್ಮ says:

    ಹೇಗಿದ್ದರೂ ಸರಿಯಿಲ್ಲ ಎಂಬ ಭಾವನೆ ಆಳವಾಗಿ ಬೇರೂರಿದ ಮನುಷ್ಯನ ಮನದ ಹುಳುಕನ್ನು ಯಥಾವತ್ತಾಗಿ ಬಿಂಬಿಸಿದ ಅರ್ಥಪೂರ್ಣ ಕವನ.

  5. ವಿದ್ಯಾ says:

    ತುಂಬಾ ಚೆನ್ನಾಗಿ ದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: