ಸಮರ

Share Button

ಜೀವನವೊಂದು ಸಮರವೆಂದು ಬಲ್ಲವರು ಹೇಳಿದ್ದಾರೆ
ಹಾಗಲ್ಲವೆಂದು ಹೇಳಲು ನನಗೂ ಯಾವ ಕಾರಣಗಳೂ ಇಲ್ಲ
ಸಮರ ಒಳಗೂ ಹೊರಗೂ ಹಗಲೂ ಇರುಳೂ
ಏನನ್ನು ಪಡೆಯಲು ಏನನ್ನು ಕಳೆಯಲು
ನನಗೂ ಗೊತ್ತಿಲ್ಲ ಯಾರಿಗೂ ಗೊತ್ತಿಲ್ಲ

ಸಮರಾಂಗಣಕೆ ಹೊರಟರು ವೀರಯೋಧರು
ಕೋದಂಡವೇನು ಗದೆಯೇನು ತೋಮರಗಳೇನು
ಈಟಿ ಕಠಾರಿ ಮುಸಲ ಭರ್ಚಿ ಕೊಂತಗಳೇನು
ಇರಿಯಹೊರಟರೆ ಈಟಿ ಇರಿಯುವುದು ಎಂಥವರ!
ತಿವಿಯ ಹೊರಟರೆ ಗದೆಯು ತಿವಿಯುವುದು ಎಂಥವರ!
ಬೀಸಿ‌ಎಸೆದರೆ ಬಾಣ ಬಾಧಿಸುವುದು ಎಂತೆಂಥವರ!
ಹಾಗೆಂದು ಇರಿಯದಿದ್ದರೆ ತಿವಿಯದಿದ್ದರೆ ಎಸೆಯದಿದ್ದರೆ ……… ……..
ಅದು ರಣಾಂಗಣವೂ ಅಲ್ಲ.

ಒಳಗಣೊಳಗಣ ಸಮರಕ್ಕೆ ಸಿದ್ಧರು ಯಾರು
ಅವರೆ ಮತ್ತೆ ಸಿದ್ಧರು !

-ಡಾ.ಮಹೇಶ್ವರಿ. ಯು, ಕಾಸರಗೋಡು

9 Responses

  1. ಚಿಕ್ಕದಾಗಿ ಚೊಕ್ಕ ಅರ್ಥವುಳ್ಳ ಬರಹ. ಅಭಿನಂದನೆಗಳು ಮಹೇಶ್ವರಿಯವರೆ.

  2. ನಯನ ಬಜಕೂಡ್ಲು says:

    ಅರ್ಥಪೂರ್ಣ ಕವನ

  3. ನಾಗರತ್ನ ಬಿ. ಅರ್. says:

    ಕವನ ಬಹಳ ಚೆನ್ನಾಗಿದೆ.ಆಲೋಚನೆಗೆ ಪೆಟ್ಟಾಗಿದೆ ಅಭಿನಂದನೆಗಳು ಮೇಡಂ.

  4. Vathsala says:

    ಕೊನೆ ಮೊದಲು ಇಲ್ಲದ ಬದುಕಿನ ಹೋರಾಟದ ಒಳಾರ್ಥ
    ತುಂಬಾ ನೈಜವಾಗಿ ಮೂಡಿದೆ.

  5. B C Narayana Murthy says:

    ಚೆನ್ನಾಗಿದೆ

  6. Padma Anand says:

    ಜೀವನ ಸಮರದ ನೈಜ ಚಿತ್ರಣವಿರುವ ಸುಂದರ ಕವನ

  7. ಶಂಕರಿ ಶರ್ಮ says:

    ಮನದೊಳಗಿನ, ಬಾಳಿನೊಳಗಿನ ಸಮರ…ಭಾವನಾತ್ಮಕ ಚಿಂತನೆ ಸೊಗಸಾಗಿದೆ.

  8. Padmini says:

    meaningful ending.

  9. ಮಹೇಶ್ವರಿ ಯು says:

    ಎಲ್ಲರಿಗೂ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: