ಬಾಳಿನ ನಾಟಕ

Share Button

ಜೀವನವೆಂಬುವ
ಕವಲು ದಾರಿಯಲಿ
ದೇವರ ನೆನೆಯುತ
ನಾವೆಲ್ಲರು ಹೊರಟಿರಲು
ಯಾವ ಭಯ ನಮಗಿಲ್ಲ.

ಕಷ್ಟ ಸುಖಗಳ
ಕಲ್ಲು ಮುಳ್ಳಿನ
ಕವಲು ದಾರಿಯಲಿ
ಎಷ್ಟೇ ನೋವಾದರೂ
ಬಾಳ ಪಯಣ ನಿಲ್ಲುವುದಿಲ್ಲ.

ತಾಯ್ತಂದೆಯರು
ಒಡ ಹುಟ್ಟಿದವರು
ಬಂಧು ಮಿತ್ರರಿಲ್ಲದೇ
ಏಕಾಂಗಿ ಸಂಚಾರಿಯಾದರು
ಬಾಳಯಾನ ಸಾಗಬೇಕಲ್ಲ.

ಸೃಷ್ಟಿಕರ್ತ ಸೃಷ್ಟಿಸಿದ
ಸೂತ್ರದ ಗೊಂಬೆಗಳಾಗಿ
ಪಾತ್ರಾಭಿನಯವ ಮಾಡುತ
ಬಾಳಿನ ನಾಟಕವ ಮುಗಿಸಿ
ನಾವೆಲ್ಲರು ಹೋಗಬೇಕಲ್ಲ.

-ಶಿವಮೂರ್ತಿ.ಹೆಚ್. ದಾವಣಗೆರೆ.

4 Responses

  1. ನಯನ ಬಜಕೂಡ್ಲು says:

    ಬದುಕಿನ ಅರ್ಥ, ಉದ್ದೇಶವನ್ನು ಸಾರುವ ಕವನ ಚೆನ್ನಾಗಿದೆ.

    • ಶಿವಮೂರ್ತಿ.ಹೆಚ್. says:

      ಹೃತ್ಪೂರ್ವಕ ಕೃತಜ್ಞತೆಗಳು ಮೇಡಂ

  2. ಶಂಕರಿ ಶರ್ಮ says:

    ಬಾಳಿನ ಕವಲುದಾರಿಯಲ್ಲಿ ಒಬ್ಬಂಟಿಯಾಗಿ ಸಾಗಬೇಕಾದ ಅನಿವಾರ್ಯತೆಯನ್ನು ಸೊಗಸಾಗಿ ಬಿಂಬಿಸಿದ ಕವನವು ಚೆನ್ನಾಗಿದೆ.

    • ಶಿವಮೂರ್ತಿ.ಹೆಚ್. says:

      ಹೃತ್ಪೂರ್ವಕ ಕೃತಜ್ಞತೆಗಳು ಸರ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: