ಹೊಸಭಾವ

Share Button

ಹಚ್ಚಿಟ್ಟ ಹಣತೆಯಿಂದ
ಬೆಳಗಿದ ಬೆಳಕಿನ ಕಿರಣಕೆ
ಅಂಧಕಾರವು ಮರೆಯಾಗಿ
ಅಲೆಅಲೆಯಾಗಿ ಬಿಡುತ್ತಿತ್ತು
ಚೈತ್ರ ಮಾಸದ ಸುವಾಸನೆ
ನೀರಿನ ಒಳ ಗರ್ಭದಿಂದ
ಮೇಲೇರಿತು ಸುಂದರವಾದ
ಅರಳಿದ ತಾವರೆ ಹೂ
ಪೊರೆ ಪೊರೆಯಾಗಿದ್ದ ನೀಲಾಗಸದಲ್ಲಿ
ರಂಗು ರಂಗಿನ ಹೊಂಬಣ್ಣದ
ಸೂರ್ಯನ ನವ ಕಿರಣಗಳು
ನನ್ನ ಮೈ ಸೋಕಿತು
ಮೆಲ್ಲನೆ ಮುತ್ತಿನಂತೆ
ಮಂಪರು ನಿದ್ದೆಯಲ್ಲಿರುವಾಗಲೇ
ನೆನಪಾಯಿತು ಇಂದು ಯುಗಾದಿ ..!!

ಎಲ್ಲೆಲ್ಲೂ ಚೈತ್ರದ ಹಸಿರು
ಏನು ಸೊಬಗು!
ಮೊಗ್ಗು ಹೂವಾಗಿ
ಹೂ ಹಣ್ಣಾಗುವ
ಸೋಜಿಗದ ಕಲೆ
ಅರಳಿದ ಮನವೊಂದು
ಹಾಡಿತು ಹೊಸರಾಗ
ಚೈತ್ರದಿಂದ ಪುಳಕಗೊಂಡು
ಹೊಳೆಯಿತು ಬಾಳಿಗೆ
ಹೊಸ ಭಾವ.

ಪ್ರಭಾಕರ ತಾಮ್ರಗೌರಿ  ಗೋಕರ್ಣ

8 Responses

  1. ಬಿ.ಆರ್.ನಾಗರತ್ನ says:

    ಚೈತ್ರದ ತೋರಣ ಪ್ರಕೃತಿಯ ಹೂರಣದೊಂದಿಗೆ ಬರುವ ಯುಗಾದಿಯ ಆಗಮನದ ಕವನ ಮನಕೆ ಮುದ ನೀಡಿತು.ಅಭಿನಂದನೆಗಳು ಮೇಡಂ.

    • ಪ್ರಭಾಕರ ತಾಮ್ರಗೌರಿ ಗೋಕರ್ಣ says:

      ಧನ್ಯವಾದಗಳು ಮೇಡಂ . ಯುಗಾದಿ ಹಬ್ಬ ಮಂಗಳವಾರ ಅದಕ್ಕೇ ಮೊದಲೇ ಬರೆದಿದ್ದು . ನಂತರ ಅಂದರೆ ಹಬ್ಬ ಮುಗಿದು ಹೋಗಿರುತ್ತೆ.

  2. ನಯನ ಬಜಕೂಡ್ಲು says:

    ಯುಗಾದಿಯ ಸಂಭ್ರಮ ತುಂಬಿದ ಕವನ ಓದಿ ಆಹ್ಲಾದ ತುಂಬಿತು ಮನದಲ್ಲಿ

    • ಪ್ರಭಾಕರ ತಾಮ್ರಗೌರಿ ಗೋಕರ್ಣ says:

      ಥ್ಯಾಂಕ್ಸ್ ಮೇಡಂ. ಯುಗಾದಿ ಹಬ್ಬಕ್ಕೋಸ್ಕರನೇ ಬರೆದ ಕವನ .

  3. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಗೀತೆ ನೆನಪಿಗೆ ಬಂತು ಧನ್ಯವಾದಗಳು

    • ಪ್ರಭಾಕರ ತಾಮ್ರಗೌರಿ ಗೋಕರ್ಣ says:

      ಥ್ಯಾಂಕ್ಯೂ ಮೇಡಂ. ಯುಗಾದಿ ಹಬ್ಬಕ್ಕಾಗಿ ಬರೆದ ಕವನ.

  4. ಶಂಕರಿ ಶರ್ಮ says:

    ಹೊಸ ಯುಗಾದಿಗೆ “ಹೊಸ ಭಾವ” ಕವನ ತೋರಣದ ಸ್ವಾಗತ.. ಬಹಳ ಸೊಗಸಾಗಿದೆ ಮೇಡಂ.

    • ಪ್ರಭಾಕರ ತಾಮ್ರಗೌರಿ ಗೋಕರ್ಣ says:

      ಥ್ಯಾಂಕ್ಯೂ ಶಂಕರಿ ಮೇಡಂ

Leave a Reply to ಪ್ರಭಾಕರ ತಾಮ್ರಗೌರಿ ಗೋಕರ್ಣ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: