ಕನವರಿಕೆ

Share Button

 

ಖಾಲಿಯಾಗಿದೆ ಜೋಲಿಹೊಡೆದಿದೆ
ಮನದ ಒಳಗಿನ ಮಂಥನ
ನಿನ್ನೆ ನೆನಪಲಿ ನಾಳೆ ಭ್ರಮೆಯಲಿ
ಬದುಕು ಸತ್ತಿದೆ ಇಂದಿನ

ಸುತ್ತ ಸಾಗುವ ಜಾತ್ರೆ ದಿಬ್ಬಣ
ಮುಸುಕ ಮಸುಕನು ಕಳೆಯದೇ
ಭಾವ ತಬ್ಬಲಿ ಮರುಗುತಿರುವುದು
ಬೆಳ್ಳಿ ಕಿರಣವು ಹೊಳೆಯದೆ

ನೋವಿನಾಸರೆ ಬೇಕು ಬದುಕಲಿ
ನಲಿವ ಮಹಡಿಯ ಕಟ್ಟಲು
ಆಸೆ ಇಟ್ಟಿಗೆ ಒಲವ ಗಾರೆಯು
ಭರವಸೆಯು ಮಹಡಿಯ ಮೆಟ್ಟಿಲು

ಬೇಲಿಯೊಳಗಡೆ ಬದುಕು ಬಂಧಿ,
ಆಚೆ ಗಂಧವು ಸೆಳೆದಿದೆ..
ನೋಟಕೆಟುಕದ ಆಟವೆಲ್ಲವು
ಮಾಟದಂತೆಯೇ ಕಾಡಿದೆ..

ಪುಟ್ಟ ಬದುಕಲಿ ಬಿಟ್ಟುಹೋಗುವ
ಹೆಜ್ಜೆಗುರುತದು ದೊಡ್ಡದು
ದೊಡ್ಡ ನಾಳೆಯ ನೆನಪಲುಳಿಯುವ
ನನ್ನ ಪಾಲದು ಪುಟ್ಟದು…

ವಿದ್ಯಾಶ್ರೀ ಅಡೂರ್.

6 Responses

  1. ನಯನ ಬಜಕೂಡ್ಲು says:

    ಸುಂದರವಾದ ಸಾಲುಗಳು. ಇಲ್ಲಿ ಬದುಕಿನ ಪ್ರತಿ ಭರವಸೆ ಹೊಂದೆಂದು ಪ್ರೇರೇಪಿಸುವ ಪಾಠ ಇದೆ

  2. ಬಿ.ಆರ್.ನಾಗರತ್ನ says:

    ಬದುಕಿನ ಭರವಸೆ ಯನ್ನು ಕವಿತೆ ಯ ಚೌಕಟ್ಟಿನಲ್ಲಿ ಕಟ್ಟಿಕೊಡುವ ಪ್ರಯತ್ನ ಕ್ಕೆ ನನ್ನದೊಂದು ನಮನ
    ಗೆಳತಿ.

    • ವಿದ್ಯಾ ಶ್ರೀ ಎಸ್ ಅಡೂರ್ says:

      ಧನ್ಯವಾದಗಳು ಮೇಡಂ…. ಅಲ್ಲಲ್ಲ.. ಗೆಳತಿ

  3. ಮಹೇಶ್ವರಿ ಯು says:

    ಚಂದದ ಹಾಡು

  4. ಶಂಕರಿ ಶರ್ಮ says:

    ಬದುಕಿನ ಏರಿಳಿತಗಳ ನಡುವೆ ಭರವಸೆಯ ಮೆಟ್ಟಲನ್ನು ತೋರಿಸಿದ ಪರಿ ಬಹಳ ಚೆನ್ನಾಗಿದೆ..ಸೊಗಸಾದ ಕವಿತೆ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: