ಸ್ವಗತ

Share Button

ಜಗತ್ತಿಗಾಗಿ ಬರೆಯಲಿಲ್ಲ
ಜನರಿಗಾಗಿ ಬರೆಯಲಿಲ್ಲ
ನನ್ನೊಳಗಿನ ನನಗಾಗಿ
ಬರೆಯುತ್ತಿರುವೆ,

ನನಗೆ ನಾನು ತಿಳಿಯಬೇಕಿತ್ತು
ನನ್ನನ್ನು ನಾನು ತಿದ್ದಿಕೊಳ್ಳಬೇಕಿತ್ತು
ನನಗೆ ನಾನು ನಿರೂಪಿಸಿಕೊಳ್ಳಬೇಕಿತ್ತು

ಸೋಲುಗಳ ಹಂಚಿಕೊಳ್ಳಲು
ಗೆಲುವುಗಳ ಬಣ್ಣಿಸಿಕೊಳ್ಳಲು
ಕಾಣಿಸಲಾಗದ ಕಂಬನಿಯ
ಕರಗಿಸಿಕೊಳ್ಳಲು
ನನಗಾಗಿ ನಾನು ಬರೆಯುತ್ತಿರುವೆ

ಯಾರನ್ನೋ ಮೆಚ್ಚಿಸುವ ಬಯಕೆಯಿಲ್ಲ
ಛಂದಸ್ಸು ಗಣಗಳ ಪರಿಚಯವಿಲ್ಲ
ಪ್ರಶಸ್ತಿಗಳ ಹಂಗಿಲ್ಲ

ಹೃದಯ ಹಾಡುತ್ತದೆ
ಹಾಳೆ ತುಂಬುತ್ತದೆ

ನನ್ನೊಳಗಿನ
ಭಾವಾದಾತ್ಮಕ್ಕೆ ತೃಪ್ತಿ ಯಾಗಿಸಲು
ನಾ ಬರೆಯುತ್ತಿರುವೆ

– ವಿದ್ಯಾ ವೆಂಕಟೇಶ್

12 Responses

  1. Meghana Kanetkar says:

    ಅದ್ಭುತ.. ಬರೆಯುತ್ತಿರಿ ಯಾವಾಗಲೂ ನಿಮಗಾಗಿ ನಿಮ್ಮ ಆತ್ಮ ಸಂತೋಷಕ್ಕಾಗಿ

  2. ನಯನ ಬಜಕೂಡ್ಲು says:

    ವಾವ್…. ನನ್ನೊಳಗು ಇದೇ ಭಾವ

    • Anonymous says:

      ಬಹುತೇಕ ಭಾವಗಳ ಬಣ್ಣ ಒಂದೇ ಅಗಿರುತ್ತದೆ ಅಲ್ಲವಾ,,,,
      ವಿದ್ಯಾ

  3. ಬಿ.ಆರ್.ನಾಗರತ್ನ says:

    ಹೌದು ಗೆಳತಿ ಸತ್ಯವಾದ ಅಭಿಪ್ರಾಯ..ಇದು ನಮ್ಮೊಳಗೆ ಇದ್ದಾಗ ಬೇರೆಯವರ ಅಭಿಪ್ರಾಯ ಅನಿಸಿಕೆಗಳ ಗೊಡವೆ ನಮಗಿರದೆ ನಿರಾಳವಾಗಿರುತ್ತೇವೆ.ಚಂದದ ಕವನ.

  4. Latha says:

    Very nice

  5. Latha says:

    Very verygood

  6. Umesh naik Naik says:

    ಎದೆಭಾರದ ಒತ್ತಡದಲ್ಲಿ ಹೊರಬಂದ ನಿಮ್ಮ ಈ ಕವಿತೆ ಅಪ್ತವಾಗಲಿದೆ ನನ್ನಂತೆ ಎಲ್ಲರಿಗೂ.ಅಭಿನಂದನೆಗಳು ನಿಮಗೆ

  7. ಶಂಕರಿ ಶರ್ಮ says:

    ಹೌದು…ಆತ್ಮ ಸಂತೋಷಕ್ಕಾಗಿ ಬರೆಯುವುದು ಹೆಚ್ಚು ಅರ್ಥವತ್ತಾಗಿರುತ್ತದೆ. ಹಿರಿ ಕವಿ ಶಿವರುದ್ರಪ್ಪನವರ “ಎದೆ ತುಂಬಿ ಹಾಡುವೆನು..” ನೆನಪಾಯ್ತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: